ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿ ಸಾವನಪ್ಪಿದ್ದಾರೆ.
ದುರಾದೃಷ್ಟವೆಂದರೆ, ಹೋದ ವಾರವಷ್ಟೇ ಮೃತ ವಿನಯ್ ನರ್ವಾಲ್ ಸಪ್ತಪದಿ ತುಳಿದಿದ್ದರು. ಮೂಲಕ ಹರ್ಯಾಣದ ಕರ್ನಾಲ್ ನವರಾದ ವಿನಯ್ ನರ್ವಾಲ್ ಕೊಚ್ಚಿ ನೌಕಾನೆಲೆಯಲ್ಲಿ ಲೆಫ್ಟಿನೆಂಟ್ ಆಗಿ ನಿಯೋಜನೆಗೊಂಡಿದ್ದರು. ಕಳೆದ ವಾರವಷ್ಟೇ ವಿವಾಹವಾಗಿದ್ದ ವಿನಯ್ ಕಾಶ್ಮೀರಕ್ಕೆ ಹನಿಮೂನ್ ಗೆ ಅಂತಾ ತೆರಳಿದ್ದರು.
ಆದರೆ, ವಿಧಿಯಾಟ ಅವರನ್ನು ಉಗ್ರರ ಗುಂಡಿಗೆ ಬಲಿಯಾಗುವಂತೆ ಮಾಡಿದೆ. ಈ ನಡುವೆ, ಸಮಸ್ತ ಭಾರತೀಯ ನೌಕಾ ಸೇನೆ ಕೇವಲ 26 ವರ್ಷದ ವಿನಯ್ ದುರ್ಮರಣಕ್ಕೆ ಕಂಬನಿ ಮಿಡಿದಿದ್ದು, ನೊಂದ ಕುಟುಂಬದೊಟ್ಟಿಗೆ ನಾವಿದ್ದೇವೆ ಅಂತಾ ಬೆಂಬಲ ಸೂಚಿಸಿದೆ.