ಕಾರವಾರ: ವ್ಯಕ್ತಿಯೋರ್ವನ ಪ್ಯಾಂಟ್ ಒಳಗೆ ನಾಗರಹಾವು ಅವಿತು ಕುಳಿತಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ.
ಪ್ಯಾಂಟ್ ಕಳೆದಿಟ್ಟು ಗೂಟಕ್ಕೆ ಹಾಕಿ, ಮತ್ತೆ ಅದನ್ನು ಹಾಕಿಕೊಳ್ಳುತ್ತಿದ್ದಾಗ ಒಳಗಿದ್ದ ನಾಗಪ್ಪ ಬುಸುಗುಟ್ಟಿದ್ದಾನೆ. ಶಿರಸಿಯ ಮಾಂತೇಶ್ ಎನ್ನುವ ವ್ಯಕ್ತಿಗೆ ಈ ಅನುಭವವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಾರಾಯಣಗುರು ನಗರದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಮೈ ಝುಮ್ ಎನ್ನಿಸುವ ಈ ವಿಡಿಯೋ ವೈರಲ್ ಆಗಿದೆ. ಹಾವು ಬುಸುಗುಡುವುದನ್ನು ನೋಡುತ್ತಿದ್ದಂತೆ ಮಾಂತೇಶ್ ಭಯದಿಂದ ಪ್ಯಾಂಟ್ ಬೀಸಿ ಒಗೆದಿದ್ದಾರೆ. ನಂತರ ಉರಗ ತಜ್ಞ ಪ್ರಶಾಂತ ಹುಲೇಕಲ್ ನಾಗರಹಾವು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಸ್ವಲ್ಪ ಯಾಮಾರಿದ್ದರೂ ಮಾಂತೇಶ್ ಕಷ್ಟಕ್ಕೆ ಎದುರಿಸಬೇಕಾಗಿರುತ್ತಿತ್ತು.