ಮೈಸೂರು: ಮೈಸೂರಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಕೇಸ್ ಇದೀಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಜಯಪುರ ಠಾಣಾ ಪೊಲೀಸರು ಮೃತ ವ್ಯಕ್ತಿಯ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ದುಷ್ಕರ್ಮಿಗಳು ಎರಡು ದಿನದ ಹಿಂದೆ ವ್ಯಕ್ತಿಯೋರ್ವನನ್ನು ತುಂಡು ತುಂಡಾಗಿ ಕತ್ತರಿಸಿ ಮೈಸೂರು ತಾಲ್ಲೂಕಿನ ಕೆ. ಹೆಮ್ಮನಹಳ್ಳಿಯ ಚಿಕ್ಕೆರೆಯಲ್ಲಿ ಎಸೆದಿದ್ದರು ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೃತ ವ್ಯಕ್ತಿ ಯಾರೆಂದು ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದಾರೆ.
ಚಿಕ್ಕೆರೆಯಲ್ಲಿ ಈಜು ತಜ್ಞರಿಂದ ವ್ಯಕ್ತಿಯ ದೇಹದ ಭಾಗಗಳಿಗಾಗಿ ತಲಾಶ್ ನಡೆದಿದ್ದು ಗಂಡಸಿನ ತಲೆ, ಎಡಮುಂಗೈ, ಬಲ ಮೊಣಕಾಲು, ಹಾಗೂ ಒಂದು ತೊಡೆಯ ಭಾಗಗಳು ಪತ್ತೆಯಾಗಿವೆ. ಇನ್ನುಳಿದ ದೇಹದ ಭಾಗಗಳನ್ನ ಹುಡುಕಲಾಗುತ್ತಿದೆ. ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ. ಇನ್ನಷ್ಟೇ ಮೃತ ವ್ಯಕ್ತಿ ಯಾರು..? ಯಾವ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂಬೆಲ್ಲಾ ಅಂಶಗಳು ಬಯಲಾಗಬೇಕಿದೆ.