ವಿಜಯಪುರ: ಶಾಸಕ ಯತ್ನಾಳ್ ಗೆ ಜೀವ ಬೆದರಿಕೆ ಹಾಕಿರುವ ವಿಚಾರವಾಗಿ ಸಚಿವ ಎಂ.ಬಿ. ಪಾಟೀಲ್ ಮಾತನಾಡಿದ್ದಾರೆ.
ವಿಜಯಪುರಲ್ಲಿ ಮಾತನಾಡಿದ ಅವರು, ಧರ್ಮದ ಬಗ್ಗೆ ಯತ್ನಾಳ್ ಮಾತನಾಡಿದ್ದು ತಪ್ಪು. ಯತ್ನಾಳ್ ಗೆ ಜೀವ ಬೆದರಿಕೆ ಹಾಕಿದ್ದು ತಪ್ಪು. ಆದರೂ ನಾವು ಯತ್ನಾಳ್ ಗೆ ಭದ್ರತೆ ನೀಡುತ್ತೇವೆ ಎಂದಿದ್ದಾರೆ.
ಯತ್ನಾಳ್ ಗೆ ಬಾಯಿಯಿದೆ ಎಂದು ಧರ್ಮದ ಬಗ್ಗೆ, ದೇವರ ಬಗ್ಗೆ ಮಾತನಾಡಬಾರದು. ಎಲ್ಲವನ್ನೂ ಯತ್ನಾಳ್ ಮೈಮೇಲೆ ಎಳೆದುಕೊಂಡಿದ್ದಾರೆ. ದೇವರ ಬಗ್ಗೆ ಯತ್ನಾಳ್ ಏಕೆ ಮಾತನಾಡಬೇಕು. ಮುಸ್ಲಿಂರಿಗೆ ಯತ್ನಾಳ್ ಬಗ್ಗೆ ಮಾತನಾಡಲೂ ಬರುತ್ತದೆ. ಜೀವ ಬೆದರಿಕೆಯ ಆಡಿಯೋ, ವಿಡಿಯೋ ಬಗ್ಗೆ ಪೊಲೀಸರು ತನಿಖೆ ಮಾಡುತ್ತಾರೆ. ಆದರೆ, ಆತಂಕ ಬೇಡ. ಯತ್ನಾಳ್ ಗೆ ಭದ್ರತೆ ನೀಡುತ್ತೇವೆ. ಯತ್ನಾಳ್ ಮಾತನಾಡಿದ್ದರಿಂದಾಗಿಯೇ ಪರಿಸ್ಥಿತಿ ಹೀಗಾಗಿದೆ ಎಂದಿದ್ದಾರೆ.