ಬನ್ನೇರುಘಟ್ಟ: ದಿನೇ ದಿನೆ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದ್ದು, ಇದರಿಂದ ಕಾಡಾಂಚಿನ ಗ್ರಾಮದ ಜನರು ಆಂತಕ ಪಡುವಂತ್ತಾಗಿದೆ. ಇದೀಗ ಬೆಂಗಳೂರು ಹೊರವಲಯ ಬನ್ನೇರುಘಟ್ಟದ ಕಾಡಂಚಿನ ರಾಗಿಹಳ್ಳಿ ಗ್ರಾಮದ ಮತ್ತೆ ಚಿರತೆ ಕಾಣಿಸಿಕೊಂಡಿದೆ.
ನಿನ್ನೆ ರಾತ್ರಿ ರಾಗಿಹಳ್ಳಿ ಸಮೀಪ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಚಿರತೆ ರಸ್ತೆದಾಟುವ ದೃಶ್ಯ ವಾಹನ ಸವಾರನ ಮೊಬೈಲ್ನಲ್ಲಿ ಸೆರೆಯಾಗಿದೆ. ವಾಹನದ ಬೆಳಕು ಕಂಡು ರಸ್ತೆ ದಾಟಿ ಪೊದೆಗಳಲ್ಲಿ ಚಿರತೆ ಮರೆಯಾಗಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದೀಗ ಚಿರತೆ ಕಂಡು ರಾಗಿಹಳ್ಳಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ನಿಲ್ಲುತ್ತಿಲ್ಲ ಅನ್ನಭಾಗ್ಯಕ್ಕೆ ಖನ್ನ.. 15 ಕ್ವಿಂಟಾಲ್ ಅಕ್ಕಿ ವಶ



















