ಬೆಳಗಾವಿ: ತಡರಾತ್ರಿವರೆಗೂ ಶಾಪ್ ನಡೆಸುತ್ತಿದ್ದವರಿಗೆ ಪೊಲೀಸರ ಲಾಠಿರುಚಿ ತೋರಿಸಿದ್ದಾರೆ. ಬೆಳಗಾವಿ ನಗರದ ಕೃಷ್ಣದೇವರಾಯ ವೃತ್ತದಲ್ಲಿರುವ ಯೂನಿಕ್ ಶಾಪ್ ಮಾಲೀಕ 12ಗಂಟೆಯಾದರೂ ಶಾಪ್ ಓಪನ್ ಇಟ್ಟಿದ್ದ. ತಡರಾತ್ರಿ ಪೊಲೀಸರು ಶಾಪ್ ಮೇಲೆ ಏಕಾಏಕಿ ದಾಳಿ ನಡೆಸಿ ಲಾಠಿ ಬಿಸಿ ಮುಟ್ಟಿಸಿದ್ದಾರೆ.
ಪೊಲೀಸರ ಲಾಠಿಏಟಿಗೆ ಅಲ್ಲಿದ್ದ ಗ್ರಾಹಕರು ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಶಾಪ್ ಮಾಲೀಕರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.