ಕಾರವಾರ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಹಲವಾರು ತೊಂದರೆಗಳು ಉದ್ಭವವಾಗುತ್ತಿವೆ. ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಳೆ (Rain)ಯಿಂದಾಗಿ ಭೂ ಕುಸಿತ (Landslide) ಉಂಟಾಗಿದೆ. ಪರಿಣಾಮ 5 ಮನೆಗಳು ಹಾನಿಯಾಗಿವೆ.
ಅಲ್ಲದೇ, ಇಲ್ಲಿಯವರೆಗೆ ಮಳೆಯಿಂದಾಗಿ 167 ಮನೆಗಳು ಹಾನಿಗೆ ಒಳಗಾಗಿವೆ ಎನ್ನಲಾಗಿದೆ. ಯಲ್ಲಾಪುರ ಹಾಗೂ ಜೋಯಿಡಾ ವ್ಯಾಪ್ತಿಯಲ್ಲಿ ಭೂ ಕುಸಿತ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಹಲವೆಡೆ ಗುಡ್ಡ ಕುಸಿತವಾಗುತ್ತಿದೆ. ಇದರಿಂದಾಗಿ ಗುಡ್ಡದ ಪ್ರದೇಶದ ಬಳಿ ವಾಸಿಸುತ್ತಿರುವವರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.