ಬೆಂಗಳೂರು: 18 ಬಿಜೆಪಿ ಶಾಸಕರ ಅಮಾನತ್ತು ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಸ್ಪೀಕರ್ ಯು.ಟಿ. ಖಾದರ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಸ್ಪೀಕರ್ ಯು.ಟಿ. ಖಾದರ್ ಕಳೆದ ಬಜೆಟ್ ಅಧಿವೇಶನದಲ್ಲಿ 18 ಬಿಜೆಪಿ ಶಾಸಕರನ್ನು ಅಶಿಸ್ತು ತೋರಿದ್ದಾರೆಂದು ಆರೋಪಿಸಿ 6 ತಿಂಗಳ ಕಾಲ ಅಮಾನತ್ತು ಮಾಡಿದ್ದರು. ಸದ್ಯ ಯು.ಟಿ. ಖಾದರ್ ಮನವೊಲಿಸುವಲ್ಲಿ ಆರ್. ಅಶೋಕ್ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
“ಕರ್ನಾಟಕ ನ್ಯೂಸ್ ಬೀಟ್”ಗೆ 18 ಶಾಸಕರ ಅಮಾನತ್ತಿನ ವಿಚಾರದ Exclusive ಮಾಹಿತಿ ಲಭ್ಯವಾಗಿದೆ. .
18 ಮಂದಿ ಬಿಜೆಪಿ ಶಾಸಕರು ಅಮಾನತ್ತಾದ ಬಳಿಕ ನಿರಂತರವಾಗಿ ಸರ್ಕಾರ ಹಾಗೂ ಸ್ಪೀಕರ್ ಜೊತೆಗೆ ಆರ್.ಅಶೋಕ್ ಸಂಪರ್ಕದಲ್ಲಿದ್ದರು. ಈ ವಿಷಯವಾಗಿ ಎರಡ್ಮೂರು ಬಾರಿ ಸ್ಪೀಕರ್ ಯು.ಟಿ. ಖಾದರ್ ರನ್ನು ಆರ್.ಅಶೋಕ್ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈಗ ಆರ್.ಅಶೋಕ್ ಮಾತುಕತೆ ಫಲವಾಗಿ ಪ್ರಕರಣ ಇತ್ಯರ್ಥಕ್ಕೆ ಬಂತಾಂಗಿದೆ.
ಪ್ರಕರಣ ಇತ್ಯರ್ಥ ಹಂತ ತಲುಪಿದ್ದಾದ್ರೂ ಏಕೆ? ಇಲ್ಲಿದೆ ನೋಡಿ ಡೀಟೈಲ್ಸ್.
- ಕಳೆದ ಬಜೆಟ್ ಅಧಿವೇಶನದಲ್ಲಿ 18 ಮಂದಿ ಬಿಜೆಪಿ ಶಾಸಕರನ್ನು ಅಮಾನತ್ತು ಮಾಡಿದ್ದ ಸ್ಪೀಕರ್ ಯು.ಟಿ.ಖಾದರ್.
- ಸರ್ಕಾರದ ಜೊತೆಗೆ ಚರ್ಚೆ ಮಾಡಿಯೇ ಅಮಾನತ್ತು ಮಾಡಿರುವುದಾಗಿ ಘೋಷಿಸಿದ್ದ ಖಾದರ್.
- ಬಳಿಕ ಪ್ರಕರಣ ಇತ್ಯರ್ಥ ಪಡಿಸುವಂತೆ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯ.
- ಸರ್ಕಾರದಲ್ಲಿ ಸಿಎಂ ಸಿದ್ಧರಾಮಯ್ಯ, ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹಾಗೂ ಸ್ಪೀಕರ್ ಯು.ಟಿ. ಖಾದರ್ ಜೊತೆಗೆ ನಿರಂತರ ಸಂಪರ್ಕ ಸಾಧಿಸಿದ್ದ ಆರ್. ಅಶೋಕ್.
- ಕೊನೆಗೂ ಸ್ಪೀಕರ್ ಮನವೊಲಿಸುವಲ್ಲಿ ಯಶಸ್ವಿಯಾಗಿರುವ ಆರ್. ಅಶೋಕ್.
- ಸ್ಪೀಕರ್, ಸಿಎಂ ಹಾಗೂ ಕಾನೂನು ಸಚಿವರಿಗೆ ಆರ್. ಅಶೋಕ್ರಿಂದ ಸಾಲು ಸಾಲು ಮಾಹಿತಿ.
- ನಮ್ಮ ಶಾಸಕರುಗಳು ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
- ಸ್ಪೀಕರ್ ಅವರನ್ನು ಭೇಟಿ ಮಾಡಿದ್ದು, ವಿಷಾದದ ಬಗ್ಗೆ ತಿಳಿಸಿದ್ದಾರೆ.
- ಅಮಾನತ್ತಾಗಿರುವ ಶಾಸಕರಿಗೆ 6 ತಿಂಗಳ ಟಿಎ, ಡಿಎ ಇಲ್ಲ ಎಂಬುದು ಸರಿಯಲ್ಲ. ಇದರಿಂದ ಕೆಲ ಶಾಸಕರು ಆರ್ಥಿಕ ಸಂಕಷ್ಟಕ್ಕೂ ಸಿಲುಕಿದ್ದಾರೆ ಎಂದು ಮಾಹಿತಿ ನೀಡಿರುವ ಆರ್.ಅಶೋಕ್.
- ಆರ್.ಅಶೋಕ್ ಮಾತಿಗೆ ಇತ್ತ ಸ್ಪೀಕರ್ ಮುಂದೆ ಸರ್ಕಾರದ ಕಡೆಯಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ಲಭ್ಯ.
- ಸರ್ಕಾರಕ್ಕೆ ಈಗ ಎರಡು ವರ್ಷ ತುಂಬಿದೆ. ಇಂತಹ ಸಂದರ್ಭದಲ್ಲಿ ವಿಪಕ್ಷದ 18 ಶಾಸಕರ ಅಮಾನತ್ತು ಮುಜುಗರ ತರುವಂತೆ ಆಗಲಿದೆ.
- ಹೀಗಾಗಿ, ಅಮಾನತ್ತು ಆದೇಶ ವಾಪಸ್ ಪಡೆಯುವಂತೆ ಸ್ಪೀಕರ್ಗೆ ಮನವಿ.
ಸದ್ಯ ಮೇ 26 ರಂದು ಹಜ್ ಯಾತ್ರೆಗೆ ಸ್ಪೀಕರ್ ಯು.ಟಿ.ಖಾದರ್ ತೆರಳುತ್ತಿರುವ ಹಿನ್ನೆಲೆಯಲ್ಲಿ ಹಜ್ ಯಾತ್ರೆಗೂ ಮುನ್ನ 18 ಶಾಸಕರ ಅಮಾನತ್ತು ಆದೇಶ ವಾಪಸ್ ಪಡೆಯುವ ಸಾಧ್ಯತೆ ಇದೆ ಎನ್ನುವ ಮಾಹಿತಿ “ಕರ್ನಾಟಕ ನ್ಯೂಸ್ ಬೀಟ್” ಗೆ Exclusive ಲಭ್ಯವಾಗಿದೆ. ಸ್ಪೀಕರ್ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.