ಬೆಂಗಳೂರು: ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಕೋರ್ಟ್ ಶಾಸಕ ಗಾಲಿ ಜನಾರ್ದನ ರೆಡ್ಡಿ ದೋಷಿ ಎಂದಿದೆ. ಅಲ್ಲದೇ, ಪ್ರಕರಣದಲ್ಲಿದ್ದವರೆಲ್ಲರನ್ನೂ ದೋಷಿ ಎಂದು ಶಿಕ್ಷೆ ಪ್ರಕಟಿಸಿದೆ.
ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಹಾಗೂ ಸಂಗಡಿಗರು 884 ಕೋಟಿ ರೂಪಾಯಿ ಅಕ್ರಮ ಎಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಕೋರ್ಟ್ , ಮಾಜಿ ಸಚಿವ, ಹಾಲಿ ಶಾಸಕ ಜನಾರ್ದನ ರೆಡ್ಡಿಗೆ ಜೈಲೂಟ ಫಿಕ್ಸ್!ರೆಡ್ಡಿಯನ್ನು (Gali Janardhan Reddy )ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ (CBI Special Court) 7 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದೆ.
ಈ ವೇಳೆ ರೆಡ್ಡಿ 3 ವರ್ಷ ಜೈಲಿನಲ್ಲಿ ಕಳೆದಿದ್ದು, ವಯಸ್ಸು ಹಾಗೂ ಸೇವೆ ಪರಿಗಣಿಸಿ ಶಿಕ್ಷೆ ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಸಿಬಿಐ ವಿಶೇಷ ಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ರೆಡ್ಡಿಗೆ ಜೈಲೂಟ ಫಿಕ್ಸ್ ಆದಂತಾಗಿದೆ.
ನಾನು ಈಗಾಗಲೇ ನಾಲ್ಕು ವರ್ಷಕ್ಕೂ ಅಧಿಕ ಸಮಯ ಜೈಲಿನಲ್ಲಿ ಕಳೆದಿದ್ದೇನೆ. ವಯಸ್ಸು ಮತ್ತು ನಾನು ಮಾಡಿದ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ. ಬಳ್ಳಾರಿ ಮತ್ತು ಗಂಗಾವತಿಯ ಜನರು ನನ್ನನ್ನು ಭಾರಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಸಾರ್ವಜನಿಕ ಸೇವೆಗೆ ನನ್ನನ್ನು ನಾನು ಸಮರ್ಪಿಸಿಕೊಂಡಿದ್ದೇನೆ. ದಯವಿಟ್ಟು ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಿ ಎಂದು ರೆಡ್ಡಿ ಕೋರ್ಟ್ಗೆ ಅಂಗಲಾಚಿದ್ದಾರೆ. ಆದರೆ ಕೋರ್ಟ್ ಅವರ ಮಾತಿಗೆ ಕೋರ್ಟ್ ಸಮ್ಮತಿ ಸೂಚಿಸಿಲ್ಲ. ಬದಲಾಗಿ ನೀವು ಜೀವಾವಧಿ ಶಿಕ್ಷೆಗೆ ಅರ್ಹರು. ನಿಮ್ಮ ಸಿಕ್ಷೆಯನ್ನು 10 ವರ್ಷಗಳಿಗೆ ಏಕೆ ಹೆಚ್ಚಿಸಬಾರದು ಎಂದು ಪ್ರಶ್ನೆ ಮಾಡಿದೆ. ಹೀಗಾಗಿ ರೆಡ್ಡಿಗೆ ಈಗ ಜೈಲು ಫಿಕ್ಸ್ ಎನ್ನುವಂತಾಗಿದೆ. ಒಂದು ವೇಳೆ ಹೈಕೋರ್ಟ್ ನಿಂದ ತಡೆ ಸಿಕ್ಕರೆ ಮಾತ್ರ ರೆಡ್ಡಿ ಹೊರಗೆ ಉಳಿಯಲಿದ್ದಾರೆ. ಇಲ್ಲವಾದರೆ, ಜಾಮೀನು ಸಿಗುವವರೆಗೂ ಜೈಲಿನಲ್ಲಿ ಇರಬೇಕು. ಶಿಕ್ಷೆಗೆ ತಡೆಯಾಜ್ಞೆ ಸಿಗದಿದ್ದರೆ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಭೀತಿಯೂ ಇದೆ.