ಚಳಿಗಾಲ ಆರಂಭವಾಗಿದೆ. ತಣ್ಣನೆಯ, ಒಣ ವಾತಾವರಣಕ್ಕೆ ಚರ್ಮ ಒಣಗಿದಂತಾಗಿ ಬಿರುಕು ಬಿಟ್ಟ ಅನುಭವದಿಂದ ಕಿರಿಕಿರಿಯಾಗುವುದು ಸಹಜ. ಅಲ್ಲದೆ ಇದರಿಂದ ಉರಿ ಸಹ ಕಾಣಿಸಿಕೊಳ್ಳುತ್ತದೆ. ಅದಾಗಲೇ ಒಣ ಚರ್ಮದ ಸಮಸ್ಯೆ ಇದ್ದರಂತೂ ಚರ್ಮ ಬಿರಿದಂತಾಗಿ ರಕ್ತವೂ ಬರಬಹುದು. ಹೀಗಾಗಿ ಚಳಿಗಾಲದಲ್ಲಿ ಚರ್ಮವನ್ನು ಮೃದುವಾಗಿ ಕಾಪಾಡಿಕೊಳ್ಳುವುದು ಒಂದು ಟಾಸ್ಕ್ ಇದ್ದಂತೆಯೇ ಸರಿ.

ಕೆಲವರಿಗೆ ಈ ವಿಂಟರ್ ಸೀಸನ್ ಅಲ್ಲಿ ಒಣ ತ್ವಚೆಯ ಸಮಸ್ಯೆ ಹೆಚ್ಚಾಗಿ ಕಾಡಲಾರಂಭಿಸುತ್ತದೆ. ಇದಕ್ಕೆ ಕಾರಣ ನಮ್ಮ ಬದಲಾದ ಪರಿಸರ, ಧೂಳು, ನೈರ್ಮಲ್ಯ, ಸೂರ್ಯನ ಕಿರಣ, ಬಿಸಿಲಿನ ಶಾಖ, ಹವಾಮಾನ ವೈಪರಿತ್ಯ ಇರಬಹುದು. ಇದರಿಂದ ನಮ್ಮ ತ್ವಚೆಯ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತದೆ.
ಹಾಗಾದರೆ ಚರ್ಮ ಡ್ರೈ ಆಗದಂತೆ, ಕೊರೆಯುವ ಚಳಿಯಲ್ಲೂ ಮೃದು, ನಯವಾದ ತ್ವಚೆಯನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ
ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ ಚರ್ಮದ ಶುಷ್ಕತೆಯನ್ನು ನಿವಾರಿಸಿ ನಯಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಚಳಿಗಾಲದ ಒಣತ್ವಚೆ ಸಮಸ್ಯೆಗೆ ಬಾದಾಮಿ ಎಣ್ಣೆ ಉತ್ತಮ ಎನ್ನಬಹುದು. ಚರ್ಮದ ಮೇಲೆ ಮಾತ್ರವಲ್ಲ ಸೇವನೆ ಕೂಡ ಮಾಡಬಹುದು.
ಹೀಗೆ ಮಾಡಿ
- ಬಾದಾಮಿ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚಿ ಮಸಾಜ್ ಮಾಡಿಕೊಳ್ಳಬಹುದು.
- ಒಂದು ಕಪ್ ಹಾಲಿಗೆ ಒಂದೆರಡು ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ಸೇರಿಸಿ ಸೇವನೆ ಮಾಡಿ. ಇದರಿಂದ ಚರ್ಮ ಒಣಗಿದ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ.
ಕಿತ್ತಳೆ ಸಿಪ್ಪೆ ಫೇಸ್ ಪ್ಯಾಕ್

ಒಣ ತ್ವಚೆಯ ಸಮಸ್ಯೆಗೆ ಫೇಸ್ ಪ್ಯಾಕ್ಗಳನ್ನು ಬಳಕೆ ಮಾಡಬಹುದಾಗಿದೆ. ಇದರಿಂದ ಚರ್ಮಕ್ಕೆ ಪೋಷಣೆ ದೊರಕಿ ಮೃದುವಾಗುತ್ತದೆ. ಅದರಲ್ಲಿ ಒಂದು ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್.
ಹೀಗೆ ಮಾಡಿ
ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿಗೆ ಒಂದು ಚಮಚ ರೋಸ್ ವಾಟರ್, ಅರ್ಧ ಚಮಚ ಲಿಂಬು ರಸ, ಹಾಗೂ ಒಂದು 2 ಹನಿ ಕುಂಕುಮಾದಿ ತೈಲವನ್ನು ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. ನಂತರ ಒಣಗಿದ ಮೇಲೆ ಮುಖವನ್ನು ತೊಳದು, ಒರೆಸದೆ ಹಾಗೆಯೇ ಬಿಡಿ.
ತುಪ್ಪ ಸೇವನೆ

ತುಪ್ಪ ಚರ್ಮವನ್ನು ಒಳಗಿನಿಂದ ಪೋಷಿಸಲು ಸಹಾಯ ಮಾಡುತ್ತದೆ. ಹೀಗಾಗಿ ಪ್ರತಿನಿತ್ಯ ಒಂದು ಚಮಚ ತುಪ್ಪವನ್ನು ಸೇವನೆ ಮಾಡುತ್ತಾ ಬಂದರೆ ಒಣ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೆ ಚಳಿಗಾಲದಲ್ಲಿ ಹೆಚ್ಚಾಗಿ ಕಾಡುವ ಕೀಲುಗಳ ನೋವಿನ ಸಮಸ್ಯೆ ಕೂಡ ತುಪ್ಪದ ಸೇವನೆಯಿಂದ ನಿವಾರಣೆಯಾಗುತ್ತದೆ.
ಹೀಗೆ ಮಾಡಿ
ಪ್ರತಿದಿನ ಮಧ್ಯಾಹ್ನ ಊಟ ಮಾಡುವಾಗ ಒಂದು ಚಮಚ ತುಪ್ಪವನ್ನು ಅನ್ನದೊಂದಿಗೆ ಬೆರೆಸಿ ಸೇವನೆ ಮಾಡಿ. ಇದರಿಂದ ಚರ್ಮದ ಮಾಶ್ಚರೈಸೇಶನ್ ಕಾಪಾಡಿಕೊಳ್ಳಬಹುದು.
ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಸೇವಿಸುವ ಆಹಾರವೂ ಮುಖ್ಯ ಕಾರಣವಾಗಿರುತ್ತದೆ.
- ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಎರಡು ಲೋಟ ನೀರನ್ನು ಸೇವಿಸುತ್ತಾ ಬನ್ನಿ. ಇದರಿಂದ ದೇಹ ನಿರ್ಜಲೀಕರಣವಾಗುವುದು ತಪ್ಪುತ್ತದೆ, ಜೊತೆಗೆ ಒಣ ಚರ್ಮದ ಸಮಸ್ಯೆಯೂ ನಿವಾರಣೆಯಾಗುತ್ತದೆ.
- ಇನ್ನು ಹಣ್ಣುಗಳಲ್ಲಿ ಕಿತ್ತಳೆ, ಮೂಸಂಬಿ ಹಾಗೂ ಪಪ್ಪಾಯ ಹಣ್ಣಗಳನ್ನು ದಿನನಿತ್ಯ ಯಾವುದಾದರೂ ಒಂದು ಹಣ್ಣನ್ನು ಸೇವನೆ ಮಾಡುತ್ತಾ ಇರಿ. ಇದರಿಂದ ತ್ವಚೆಯ ಸಮಸ್ಯೆಯಿಂದ ಮುಕ್ತಿಪಡೆಯಬಹುದಾಗಿದೆ.
ಇದನ್ನೂ ಓದಿ : ಧಾರವಾಡ | ಡಿವೈಡರ್ಗೆ ಕಾರು ಡಿಕ್ಕಿ : ಇನ್ಸಪೆಕ್ಟರ್ ಸಜೀವ ದಹನ..!



















