ಬೆಂಗಳೂರು: ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಆರೆಸ್ಸೆಸ್ ಕಚೇರಿಯಲ್ಲಿ ಹೈವೋಲ್ಟೇಜ್ ಸಭೆ ನಡೆದಿದೆ.
ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಆರೆಸ್ಸೆಸ್ ಪ್ರಮುಖರು ಮಾಹಿತಿ ನೀಡಿದ್ದಾರೆ. ಸದ್ಯ ರಾಜ್ಯದಲ್ಲಿ ಬಿ.ವೈ. ವಿಜಯೇಂದ್ರ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನೇ ಹೈಕಮಾಂಡ್ ನಾಯಕರು ಮುಂದುವರೆಸುವ ಇರಾದೆ ಹೊಂದಿದ್ದಾರೆ. ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ನಾವು ಅವರನ್ನೇ ಮುಂದುವರೆಸುವುದು ಉಳಿತು ಎಂಬುವುದು ನಮ್ಮ ಅಭಿಪ್ರಾಯ.
ಈಗಾಗಲೇ ರಾಜ್ಯದಲ್ಲಿ ಮುಡಾ ಹಾಗೂ ವಾಲ್ಮೀಕಿ ಹಗರಣಗಳಲ್ಲಿ ಸರ್ಕಾರವನ್ನು ಕಟ್ಟಿ ಹಾಕುವ ಕೆಲಸವನ್ನು ವಿಜಯೇಂದ್ರರ ನೇತೃತ್ವದಲ್ಲಿ ಮಾಡಲಾಗಿದೆ. ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಅಕ್ರಮದಲ್ಲಿ 14 ನಿವೇಶನಗಳನ್ನು ಅವರು ವಾಪಸ್ ಹಿಂತಿರುಗಿಸಿದ್ದಾರೆ. ಅದು ಪಾದಯಾತ್ರೆಯ ಬಳಿಕ. ಪಾದಯಾತ್ರೆ ಆಯೋಜನೆ ಆಗಿದ್ದು, ಅದನ್ನು ಮಾಡಿದ್ದು ವಿಜಯೇಂದ್ರ ಅವರೇ. ಹೀಗಾಗಿ, ಜೆಡಿಎಸ್ ಜೊತೆಗೆ ಸಮನ್ವಯತೆ ಸಾಧಿಸುತ್ತಾ? ರಾಜ್ಯದಲ್ಲಿ ಸಂಘಟನೆಗೆ ಒತ್ತು ನೀಡಬೇಕು ಅಂದರೆ ಯುವಕರೇ ಅರಿಯಾದ ಆಯ್ಕೆ ಎಂದು ಆರೆಸ್ಸೆಸ್ ಹೇಳಿದೆ ಎನ್ನಲಾಗಿದೆ.
ಈಗಾಗಲೇ ಹೈಕಮಾಂಡ್ ನಾಯಕರು ವಿಜಯೇಂದ್ರರಿಗೆ ರಾಜ್ಯಾಧ್ಯಕ್ಷ ಪದವಿ ಕೊಟ್ಟಿದ್ದಾರೆ. ಅದನ್ನೇ ಯಥಾಸ್ಥಿತಿ ಮುಂದುವರೆಸುವ ಆಸಕ್ತಿಯನ್ನು ನಾವು ತೋರುತ್ತಿದ್ದೇವೆ. ಹೀಗಾಗಿ, ಇದೇ ಮಾಹಿತಿಯನ್ನು ಹೈಕಮಾಂಡ್ ನಾಯಕರಿಗೂ ಕಳುಹಿಸುತ್ತೇವೆ ಎಂದು ಆರೆಸ್ಸೆಸ್ ಪ್ರಮುಖರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸದ್ಯಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ವಿಜಯೇಂದ್ರ ಮುಂದುವರೆಯುವ ಸಾಧ್ಯತೆ ಬಹುತೇಕ ಖಚಿತ ನ್ನಲಾಗುತ್ತಿದೆ.