26 ಅಮಾಯಕ ಪ್ರವಾಸಿಗರ ಉಸಿರು ನಿಲ್ಲಿಸಿದವರ ರುಂಡ ಚೆಂಡಾಡಬೇಕಿದೆ. ನಮ್ಮ ಮನೆಗೇ ನುಗ್ಗಿ ನಮ್ಮವರ ರಕ್ತವನ್ನೇ ಹೀರಿದವರ ಎದೆ ಬಗೆಯಬೇಕಿದೆ. ಧರ್ಮ ಯುದ್ಧದ ಹೆಸರಲ್ಲಿ ಉಗ್ರವಾದಕ್ಕೆ ಹಾಲೆರೆಯುತ್ತಿರುವ ಪಾಕಿಸ್ಥಾನ ಮತ್ತೆಂದೂ ಬಾಲ ಬಿಚ್ಚದಂತೆ ಬಿಸಿ ಕಾಸಬೇಕಿದೆ. ಇದರ ಮೊದಲ ಚರಣವನ್ನ ಭಾರತವೀಗ ಬರೆದಾಗಿದೆ. ಅಲ್ಲಿಗೆ ಪಾಕ್ ವಿರುದ್ಧ ಅಘೋಷಿತ ಯುದ್ಧಕ್ಕೆ ಚಾಲನೆ ಸಿಕ್ಕಾಗಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಪುಂಡಾಟ
ಕಳೆದ ಮಧ್ಯರಾತ್ರಿ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ಥಾನ ಮತ್ತೆ ಕ್ಯಾತೆ ತೆಗೆದಿದೆ. ಭಾರತದ ಗಡಿ ಪೋಸ್ಟ್ ಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯೂ ದಿಟ್ಟ ಉತ್ತರ ನೀಡಿದೆ. ಅಷ್ಟೇ ಅಲ್ಲಾ ಪಹಲ್ಗಾಮ್ ನಲ್ಲಿ ರಕ್ತದೋಕುಳಿ ಆಡಿದವರ ಬುಡವನ್ನೇ ಜಾಲಾಡುತ್ತಿದೆ. ಆಪರೇಷನ್ ಆಲ್ ಔಟ್ ಹೆಸರಿನಲ್ಲಿ ಕಾಶ್ಮೀರದ ಅನಂತ್ ನಾಗ್, ಬಂಡೀಪೋರಾ, ರಜೌರಿ ಪ್ರಾಂತ್ಯಗಳಲ್ಲಿ ಶಂಕಿತ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿ ಸೇನೆ ಕಾರ್ಯಚರಣೆ ನಡೆಸಿದೆ. ಬಂಡೀಪೋರಾದಲ್ಲಿ ಶಂಕಿತ ಉಗ್ರನ ಮನೆಯನ್ನೇ ಉಡಾಯಿಸಲಾಗಿದ್ದು, ಹಲವು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ.
ಐಎನ್ ಎಸ್ ಸೂರತ್ ನಿಂದ ಸಿಡಿದ ಕ್ಷಿಪಣಿ
ಇನ್ನೊಂದೆಡೆ ಪಾಕಿಸ್ಥಾನದ ವಿರುದ್ಧ ಸಮರಕ್ಕೆ ಭಾರತ ರಂಗತಾಲೀಮು ಆರಂಭಿಸಿದೆ. ಅರಬ್ಬಿ ಸಮುದ್ರದಲ್ಲಿ ಭಾರತದ ನೌಕಾಪಡೆಯ ಐಎನ್ ಎಸ್ ಸೂರತ್ ಕ್ಷಪಣಿ ಪರೀಕ್ಷೆ ನಡೆಸಿದೆ. ಇತ್ತ ಪಿಒಕೆ ವ್ಯಾಪ್ತಿಯಲ್ಲಿ ಭಾರತದ ಫೈಟರ್ ಜೆಟ್ ಗಳು ನಿನ್ನೆಯಿಂದ ನಿರಂತರ ಗಸ್ತು ಸುತ್ತಿತ್ತಿವೆ. ಸುಖೋಯ್, ತೇಜಸ್ ಯುದ್ಧ ವಿಮಾನಗಳು ಪಾಕಿಸ್ಥಾನದ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟು ಕುಳಿತಿವೆ.
ಮೋದಿ ರೂಪಿಸ್ತಿದ್ದಾರಾ ಮತ್ತೊಂದು ಮಾಸ್ಟರ್ ಪ್ಲ್ಯಾನ್
ಈ ಹಿಂದೆ ಉರಿ ದಾಳಿಯಾದಾಗ ಪಿಒಕೆ ವ್ಯಾಪ್ತಿಯಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಅಷ್ಟೇ ಅಲ್ಲಾ ನೂರಾರು ಉಗ್ರರನ್ನು ಹೊಸಕಿ ಹಾಕಲಾಗಿತ್ತು. ಇದೀಗ ಪಹಲ್ಗಾಮ್ ಪ್ರತೀಕಾರಕ್ಕೆ ಪ್ರಧಾನಿ ಮೋದಿ ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಜೊತೆ ನಿರಂತರ ಚರ್ಚೆಯಲ್ಲಿರುವ ಮೋದಿ, ಮುಂದಿನ ರಣತಂತ್ರ ರೂಪಿಸ್ತಿದ್ದಾರೆ. ಈ ಬಾರಿ ಪಾಕ್ ಮೇಲೆ ಏರ್ ಸ್ಟ್ರೈಕ್ ನಿಶ್ಚಿತ ಅಂತಲೇ ಎನ್ನಲಾಗ್ತಿದೆ. ಈ ನಿಟ್ಟಿನಲ್ಲೇ ಪಾಕ್ ಕೂಡಾ ಕರಾಚಿಯಿಂದ ಯುದ್ಧ ವಿಮಾನಗಳನ್ನ ಲಾಹೋರ್ ಹಾಗೂ ರಾವಲ್ಪಿಂಡಿಗೆ ರವಾನಿಸಿದೆ. ಉಗ್ರವಾದವನ್ನ ಬೇರು ಸಹಿತ ಕಿತ್ತು ಹಾಕೋ ಸಂಕಲ್ಪ ಮಾಡಿರುವ ಮೋದಿ ನಿನ್ನೆಯಷ್ಟೇ ಕಲ್ಪನೆಗೂ ನಿಲುದಂಥಾ ಪ್ರತೀಕಾರ ಎಂಬ ಸಂದೇಶ ರವಾನಿಸಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ಪಾಕ್ ನೇರ ಕೈವಾಡಕ್ಕೆ ಶಕ್ತ ಸಾಕ್ಷ್ಯ ಸಿಕ್ರೆ ಕುರುಕ್ಷೇತ್ರ ಆರಂಭವಾಗಲಿದೆ. ಹೀಗಾಗಿ ಭಾರತದ ಮುಂದಿನ ಹೆಜ್ಜೆ ಇತಿಹಾಸದ ಪುಟದಲ್ಲಿ ಅಮರವಾಗಲಿದೆ ಎನ್ನಲಾಗ್ತಿದೆ.