1971….ಕಾಶ್ಮೀರವನ್ನು ಕೈವಶ ಮಾಡಿಕೊಳ್ಳೋ ಹಪಹಪಿಗೆ ಬಿದ್ದಿದ್ದ ಪಾಕಿಸ್ತಾನ ತನ್ನ ಪಾಪದ ಕಾರ್ಯ ಆರಂಭಿಸಿತ್ತು. ಗಡಿಯಲ್ಲಿ ಅಪ್ರಚೋದಿತ ದಾಳಿಗಳು ನಿರಂತರವಾಗಿ ಮುಂದುವರಿದಿದ್ದವು. ಇತ್ತ ಭಾರತ ಮಾತ್ರ ಒಳಗೊಳಗೆ ದೊಡ್ಡದೊಂದು ಚರಿತ್ರೆ ಸೃಷ್ಟಿಸುವ ಕಾರ್ಯಕ್ಕೆ ಮುನ್ನುಡಿ ಬರೆದಾಗಿತ್ತು. ಅಂದಿನ ಪೂರ್ವ ಪಾಕಿಸ್ತಾನ. ಇಂದಿನ ಬಾಂಗ್ಲಾದೇಶವಾಗಿ ರೂಪಗೊಳ್ಳುವ ಹಿಂದಿನ ದೊಡ್ಡ ಗಣಿತ ನಿಜಕ್ಕೂ ಇಂದಿನ ಸನ್ನಿವೇಶವಕ್ಕೆ ಮತ್ತೆ ಹೇಳಿ ಮಾಡಿಸಿದ ಹಾಗಿದೆ. ಅಂದು ಭಾರತದ ಪ್ರಧಾನಿ ಇಂದಿರಾ ಗಾಂಧಿ, ಪಾಕಿಸ್ತಾನದ ನಖಾರಗಳನ್ನೆಲ್ಲಾ ಸುಧಾರಿಸಿಕೊಂಡೇ ಅತಿದೊಡ್ಡ ಪೆಟ್ಟೊಂದನ್ನು ನೀಡಿದ್ದರು. ಅಖಂಡ ಪಾಕಿಸ್ತಾನವನ್ನು ತುಂಡರಿಸಿ ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶವಾಗಿ ಸ್ವತಂತ್ರ ರಾಷ್ಟ್ರವಾಗಿಸಿದ್ದರು. ಈ ಮೂಲಕ ಪಾಕಿಗಳ ದುರಹಂಕಾರದ ಗರ್ವಭಂಗ ಮಾಡಿದರು.

ದಿಕ್ಕು ತಪ್ಪಿತ್ತು ಪ್ರಧಾನಿ ಯಾಹ್ಯಾ ಖಾನ್ ರ ರಣತಂತ್ರ
ಕಾಶ್ಮೀರದ ಮೇಲೆ ವಕ್ರದೃಷ್ಟಿ ಬೀರುತ್ತಲೇ ಇದ್ದ ಪಾಕ್ ಗೆ ಕಡೆಗೂ ಸತ್ಯದ ಅರಿವಾಗಿತ್ತು. ಪಾಕಿಸ್ತಾನ ಇಬ್ಬಾಗವಾಗುವ ಮುನ್ಸೂಚನೆ ಅಂದಿನ ಪ್ರಧಾನಿ ಯಾಹ್ಯಾ ಖಾನ್ ರಿಗೆ ಸಿಕ್ಕಿತ್ತು. ಇತ್ತ ಮುಜಬಿರ್ ರೆಹಮಾನ್ ರ ಸ್ವತಂತ್ರ ಬಾಂಗ್ಲಾ ರಾಷ್ಟ್ರ ರಚನೆಗೆ ಇಂದಿರಾ ನೀರೆದಿದ್ದರು. ಮುಕ್ತಿಬಾಯಿನಿ ಸೇನೆಗೆ ಭಾರತೀಯ ಸೇನೆಯಿಂದಲೇ ಸಶಸ್ತ್ರ ಮತ್ತು ಶಸ್ತ್ರ ಬಳಕೆಯ ತರಬೇತಿ ಕೊಡಿಸಿದ್ದರು ಇಂದಿರಾ. ಇದರ ಫಲವೆನ್ನುವಂತೆ 1972ರಲ್ಲಿ ಬಾಂಗ್ಲಾದೇಶ ರಚನೆಯಾಗಿತ್ತು. ಪಾಕಿಸ್ತಾನ ಇಬ್ಭಾಗವಾಗಿತ್ತು. ಆದ್ರೆ ಇತಿಹಾಸ ಮರೆಯದ ಘಟನೆಯೊಂದು ಅಂದು ಭಾರತದ ರಾಜಸ್ಥಾನದಲ್ಲಿ ನಡೆದಿತ್ತು. 1971ರಲ್ಲಿ ಪೂರ್ವ ಪಾಕಿಸ್ತಾನ ಕೈತಪ್ಪೋ ಸುಳಿವು ಸಿಕ್ಕಿದ ಯಾಹ್ಯಾ ಖಾನ್, ಭಾರತದ ರಾಜಸ್ಥಾನಕ್ಕೆ ಸೇನೆಯನ್ನು ನುಗ್ಗಿಸಿದ್ರು.

ಲೋಂಗೇವಾಲಾ ಸೇನಾ ನೆಲೆಯಲ್ಲಿ ಅಂದು ಕಾವಲಿಗೆ ಇದ್ದದ್ದು 120 ಭಾರತೀಯ ಯೋಧರು ಮಾತ್ರ. ಆದ್ರೆ ಅತ್ತ ನುಗ್ಗಿಬಂದದ್ದು ಟ್ಯಾಂಕರ್ ರೆಜಿಮೆಂಟ್ ನೊಂದಿಗಿದ್ದ 2 ಸಾವಿರ ಯೋಧರು. ಭಾರತದ ಈ ಲೋಂಗೇವಾಲವನ್ನು ಕೈವಶ ಮಾಡಿಕೊಂಡು ಮುಂದೆ ಮಾತುಕತೆಗೆ ಅಂತಾ ಬಂದ್ರೆ ಬಾಂಗ್ಲಾ ಮರಳಿ ಪಡೆಯೋ ಬದಲಿಗೆ ಇದನ್ನು ಬಿಟ್ಟುಕೊಡೋ ಲೆಕ್ಕ ಯಾಹ್ಯಾರಿಗಿತ್ತು. ಆದ್ರೆ ಕೇವಲ 120 ಮಂದಿ ಪಂಜಾಬ್ ರೆಜಿಮೆಂಟಿನ ಯೋಧರು ಅವತ್ತು 2 ಸಾವಿರ ಯೋಧರು ಸೇರಿದಂತೆ 40 ಟ್ಯಾಂಕರ್ ಗಳನ್ನು ಸುಟ್ಟು ಕರಕಲಾಗಿಸಿದ್ದರು.

ಪಾಕಿಸ್ತಾನ ಮೂರು ಭಾಗವಾಗುವುದು ನಿಶ್ಚಿತವಾ?
ಅವತ್ತು ಇಂದಿರಾ ಗಾಂಧಿ ಪಾಕಿಸ್ತಾನವನ್ನೇ ತುಂಡರಿಸಿ ಬಾಂಗ್ಲಾ ರೂಪಗೊಳ್ಳುವಂತೆ ಮಾಡಿ ಪಾಕಿಸ್ತಾನದ ಭುಜವನ್ನೇ ತುಂಡರಿಸಿದ್ದರು. ಈಗ ಮತ್ತದೇ ಗೇಮ್ ಪ್ಲ್ಯಾನ್ ರೂಪಿಸ್ತಿದ್ದಾರಾ ಮೋದಿ ಎನ್ನುವ ಚರ್ಚೆ ಶುರುವಾಗಿದೆ. ಈಗಾಗಲೇ ಸ್ವಾತಂತ್ರಕ್ಕಾಗಿ ಬಲೂಚಿಗಳು ಕ್ರಾಂತಿಯ ಹಾದಿ ತುಳಿದಿದ್ದಾರೆ. ಬಲೂಚಿಗಳಿಗೂ ಚೀನಾ ದೊಡ್ಡ ದುಷ್ಮನ್. ಹಾಗೆ ನೋಡಿದ್ರೆ ಭಾರತಕ್ಕೂ ಚೀನಿಗಳು ಅಂದರೆ, ಅಷ್ಟಕ್ಕಷ್ಟೇ. ಹೀಗಾಗಿ ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಬಲೂಚ್ ಹೋರಾಟಕ್ಕೆ ಬೆಂಬಲವಾಗಿ ನಿಂತು ಸ್ವತಂತ್ರ ರಾಷ್ಟ್ರವಾಗಿಸಿದ್ರೆ ಪಾಕಿಸ್ತಾನಕ್ಕೆ ದೊಡ್ಡ ಆರ್ಥಿಕ ಮೂಲವೊಂದು ಕೈತಪ್ಪಿದಂತಾಗುತ್ತೆ. ಅಸಲಿಗೆ ಈ ಬಲೂಚ್ ಪಾಕಿಗಳನ್ನು ಕೈಬೀಸಿ ಕರೆದಿದ್ದೇ ಇಲ್ಲಿನ ಚಿನ್ನ, ಅನಿಲ ಮತ್ತು ಖನಿಜ ನಿಕ್ಷೇಪಗಳು. ಇಂಥಾ ಬಲೂಚನ್ನು ಬೇರೆ ಮಾಡಿದ್ರೆ ಪಾಕ್ ಅರ್ಥಿಕವಾಗಿ ವಿಲವಿಲ ಎನ್ನುತ್ತೆ. ಅಷ್ಟೇ ಅಲ್ಲಾ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಕತೆಯೂ ಮುಗಿದಂತೆ. ಗದ್ವಾರ್ ಬಂದರು ಯೋಜನೆಯೂ ನೀರುಪಾಲಾದಂತೆ. ಹೀಗಾಗಿ ಬಲೂಚ್ ಪ್ರತ್ಯೇಕ ರಾಷ್ಟ್ರವಾಗಿಸಿ ಪಾಕಿಸ್ತಾನವನ್ನು ಬಗ್ಗು ಬಡಿಯೋ ತಂತ್ರ ಭಾರತಕ್ಕಿದೆ.

ಪಿಒಕೆ ಇನ್ಮುಂದೆ ಭಾರತದ ಸ್ವತ್ತು
ಎರಡನೇ ದೊಡ್ಡ ಮಾಸ್ಟರ್ ಪ್ಲ್ಯಾನ್ ಅಂದ್ರೆ ಅದು ಪಾಕ್ ಆಕ್ರಮಿತ ಕಾಶ್ಮೀರದ ಕಬ್ಜಾ. ಹೌದು, ನಿನ್ನೆಯಷ್ಟೇ ಪ್ರಧಾನಿ ಮೋದಿ ಖುದ್ದು, ಪಿಓಕೆಯಿಂದ ಹೊರ ಹೋದ್ರಷ್ಟೇ ಮುಂದಿನ ಮಾತು ಅಂತಾ ಶರಾ ಬರೆದಿದ್ದಾರೆ. ಒಂದೊಮ್ಮೆ ದಶಕಗಳಿಂದ ಉಗ್ರರು ಬಿಡಾರ ಹೂಡಿ ಕುಳಿತಿರುವ ಪಿಓಕೆ ಭಾರತದ ಅಂಗವಾಗಿಸಿಕೊಳ್ಳೋ ತಂತ್ರಗಾರಿಕೆಯನ್ನೂ ನಡೆಸಲಾಗಿದೆ. ಪಿಓಕೆ ಭಾರತದ ಪಾಲಾದ್ರೆ, ಅಲ್ಲಿಗೆ ಪಾಕಿಸ್ತಾನ ಮತ್ತೆ ತೂತುಬಿದ್ದ ದೋಣಿಯಂತಾಗಲಿದೆ. ಈಗಾಗಲೇ ಪೂರ್ವ ಪಾಕಿಸ್ತಾನ ಕೈತಪ್ಪಿದೆ, ಬಲೂಚ್ ಸ್ವತಂತ್ರವಾಗಲಿದೆ, ಹೀಗಾಗಿ ಪಿಓಕೆಯೂ ಕೈತಪ್ಪಿದ್ರೆ ಪಾಕ್ ಕಣ್ಣಿಲ್ಲದ ದೃಷ್ಟಿಹೀನನಂತಾಗಿಬಿಡಬಹುದು.

ಭಾರತಕ್ಕೆ ಸೇರುತ್ತಾ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ?
ಇನ್ನೊಂದು ರಣತಂತ್ರದಂತೆ ಈಗಾಗಲೇ ಪಾಕಿಸ್ತಾನದ ದುರಾಡಳಿತದಿಂದ ಬೇಸತ್ತಿರುವ ಪಾಕ್ ನ ಪಂಜಾಬ್ ಪ್ರಾಂತ್ಯವನ್ನು ಭಾರತಕ್ಕೆ ಸೇರ್ಪಡೆ ಮಾಡಿಕೊಳ್ಳೋದು. ಅಷ್ಟಕ್ಕೂ ವಾಘಾ-ಅಟ್ಟಾರಿ ಗಡಿ ಮೂಲಕ ಪಂಜಾಬ್ ಪ್ರಾಂತ್ಯದ ಜನರಿಗೆ ಭಾರತದೊಟ್ಟಿಗೆ ಉತ್ತಮ ಬಾಂಧವ್ಯವಿದೆ. ಇದನ್ನೇ ಅಸ್ತ್ರವಾಗಿಸಿಕೊಂಡು ನಿರುದ್ಯೋಗ, ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಪ್ರಾಂತ್ಯವನ್ನೇ ಭಾರತಕ್ಕೆ ಸೇರಿಸಿಕೊಳ್ಳೋ ದೊಡ್ಡ ಉಮೇದು ಭಾರತಕ್ಕಿದೆ. ಹೀಗಾದಲ್ಲಿ ಪಾಕಿಸ್ತಾನ ನಿಜಕ್ಕೂ ತನ್ನ ಮೆದುಳನ್ನೇ ಕಳೆದುಕೊಂಡಂತಾಗುತ್ತೆ.

ಪಾಕಿಸ್ತಾನಕ್ಕೆ ಮೋದಿ ಕೊಡ್ತಾರಾ ಮಾಸ್ಟರ್ ಸ್ಟ್ರೋಕ್
1971ರಲ್ಲಿ ಅಂದಿನ ಪ್ರಧಾನಿ ಪಾಕಿಸ್ತಾನವನ್ನೇ ಇಬ್ಭಾಗ ಮಾಡಿ ಆ ದೇಶ ಚೇತರಿಸಿಕೊಳ್ಳದಂತೆ ಮಾಡಿದ್ರು. ಕುತಂತ್ರ ಮಾಡೋ ಜಾಯಮಾನದ ಪಾಕಿಗಳಿಗೆ ಮರ್ಮಾಘಾತ ನೀಡಿದ್ದ ಇಂದಿರಾ ಅಂದು ಯಾರೂ ಊಹಿಸದಂತೆ ಬಾಂಗ್ಲಾದೇಶವನ್ನು ರಚಿಸಿ, ಪಾಕಿಗಳ ಕುತಂತ್ರ ನೀತಿಯನ್ನು ಕುಟಿಲ ನೀತಿಯಿಂದ ಸಂಹರಿಸಿದ್ರು. ಇದೀಗ ಮೋದಿ ಮುಂದೆಯೂ ಇಂಥದ್ದೇ ಅವಕಾಶ ಇದೆ. ಬಲೂಚ್, ಪಂಜಾಬ್, ಪಿಓಕೆ ಹೀಗೆ ಪಾಕಿಸ್ತಾನವನ್ನು 3 ಭಾಗ ಮಾಡಿದ್ರೆ ಅಲ್ಲಿಗೆ ಆ ದೇಶ ಸರ್ವನಾಶವಾದಂತೆ ಅನ್ನೋ ಗಣಿತ ನಡೆದಿದೆ. ಹೀಗಾಗಿ 1971ರ ಇತಿಹಾಸ ಪುನರಪಿಯಾಗೋ ಕಾಲ ಸನ್ನಿಹಿತವಾಗುತ್ತಿದೆಯಾ ಎನ್ನಲಾಗುತ್ತಿದೆ.