ಭಾರತದಿಂದ ಬೇರ್ಪಟ್ಟಾಗಿನಿಂದಲೂ ಪಾಕಿಸ್ತಾನ ಹಗೆ ಸಾಧಿಸುತ್ತಲೇ ಬರುತ್ತಿದೆ. ವಿಭಜನೆ ಬಳಿಕ ಕಾಶ್ಮೀರ ವಿಷಯದಲ್ಲಿ ಆರಂಭವಾದ ಪಾಕಿಗಳ ಕ್ಯಾತೆ ಅರ್ಧಶತಮಾನ ಕಳೆದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. 70ರ ದಶಕದಲ್ಲಿ ಭಾರತವನ್ನು ಕೆಣಕಿ ತನ್ನ ಅವಿಭಾಜ್ಯವಾಗಿದ್ದ ಭೂಮಿಯನ್ನು ಬಾಂಗ್ಲಾದೇಶವಾಗಿ ರೂಪಗೊಳ್ಳುವಂತೆ ಮಾಡಿಕೊಂಡಿತ್ತು ಪಾಕಿಸ್ತಾನ. ಅಲ್ಲಿಂದ ಮುಂದೆ ಎದೆಗೆ ಎದೆಕೊಟ್ಟು ಹೋರಾಡುವ ನರವಿಲ್ಲದವರು ಉಗ್ರವಾದವನ್ನು ತಮ್ಮಸಾಕು ನಾಯಿಗಳಂತೆ ಸಲುಹಿ ಭಾರತದ ವಿರುದ್ಧ ಚೂಬಿಡುತ್ತಲೇ ಬಂದಿದ್ದಾರೆ. ಮುಂಬೈ ದಾಳಿ ಬಳಿಕವೇ ಉಗ್ರವಾದವನ್ನು ಮೆಟ್ಟಿನಿಂತಿದ್ದರೆ ಉರಿ, ಬಾಲಾಕೋಟ್, ಪಹಲ್ಗಾಮ್ ನಂಥಾ ಕುಕೃತ್ಯಗಳು ಘಟಿಸುತ್ತಲೇ ಇರಲಿಲ್ಲ. ಆದರೆ, ಕಡೆಗೂ ಬದಲಾದ ಭಾರತವಿಂದು ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆ ಅನ್ನೋ ಸಂದೇಶವನ್ನ ಜಗತ್ತಿಗೇ ರವಾನಿಸಿದೆ.
ಹಫೀಜ್ ಸಯೀದ್, ಮಸೂದ್ ಅಜರ್ ಖತಂ?
ಭಾರತದ ಆಪರೇಷನ್ ಸಿಂಧೂರ ಪಾಕಿಸ್ತಾನಿಗಳನ್ನು ಇನ್ನಿಲ್ಲದಂತೆ ಅಡ್ಡಡ್ಡ ಮಲಗಿಸಿದೆ. ಜಿಹಾದಿಗಳನ್ನು ಪೋಷಿಸುತ್ತ ಬಂದವರೀಗ ಜಗತ್ತಿನ ಮುಂದೆ ಬೆತ್ತಲಾಗಿದ್ದಾರೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಿರೋ ಭಾರತೀಯ ಸಶಸ್ತ್ರ ಪಡೆಗಳು ಉಗ್ರರ ಹುಟ್ಟಡಗಿಸಿವೆ. ಜೈಶ್, ಲಷ್ಕರ್ ನ ದೊಡ್ಡ ಅಡ್ಡೆಗಳಾಗಿದ್ದ ಪ್ರದೇಶಗಳನ್ನೇ ಗುರಿಯಾಗಿಸಿ ನುಗ್ಗಿರೋ ಭಾರತೀಯ ಸೇನೆ, ಇಲ್ಲಿನ ತರಬೇತಿ ಕೇಂದ್ರ, ಶಸ್ತ್ರಾಗಾರಗಳನ್ನೆಲ್ಲಾ ಧೂಳಿಪಟ ಮಾಡಿದೆ. ಭವಿಷ್ಯದಲ್ಲಿ ಭಾರತದತ್ತ ತಲೆ ಮಾಡಿ ಮಲಗೋದಕ್ಕೂ ಬೆವರಬೇಕು ಎನ್ನುವಂಥಾ ಪೆಟ್ಟು ಕೊಟ್ಟಿದೆ ಭಾರತ.
ತೆಪ್ಪಗಿರುವ ಪಾಕ್ ಬಾಲ ಬಿಚ್ಚಿದ್ರೆ ಕತ್ತರಿ ಪ್ರಯೋಗ
ಮೇಡ್ ಇನ್ ಚೀನಾ ರೆಡಾರ್ ಗಳನ್ನು ನಂಬಿ ನಿದ್ರೆಗೆ ಜಾರಿದ್ದ ಪಾಕ್ ಸೇನೆ ಕಣ್ಬಿಡುವದರೊಳಗಾಗಿ ರಕ್ತದ ಕೋಡಿಯನ್ನೇ ಭಾರತ ಹರಿಸಿದೆ. ಮನೆಯೊಳಗೆ ನುಗ್ಗಿ ಅಟ್ಟಾಡಿಸಿ ಉಗ್ರರ ಹೆಡೆಮುರಿ ಕಟ್ಟಿರೋ ಹಿಂದೂಸ್ತಾನ, ಪಾಕಿಸ್ತಾನದ ಉಗ್ರವಾದ ಪ್ರೇಮವನ್ನು ಜಗತ್ತಿನ ಮುಂದೆ ನಗ್ನವಾಗಿಸಿದೆ. ಹಾಗಂತಾ ಸದ್ಯಕ್ಕಂತೂ ಈ ಬಗ್ಗೆ ಚಕಾರವೆತ್ತದ ಪಾಕಿಗಳು ಒಂದೊಮ್ಮೆ ಬಾಲಬಿಚ್ಚಿದ್ರೆ ಖೇಲ್ ಖತಂ ದುಕಾನ್ ಬಂದ್ ಅಂತಲೇ ಲೆಕ್ಕ.
ಗಡಿಯಲ್ಲಿ ಗಸ್ತು ತಿರುಗುತ್ತಿವೆ ಮಿರಾಜ್, ಸುಖೇಯ್!
ಭಾರತದ ಆಪರೇಷನ್ ಸಿಂಧೂರಕ್ಕೆ ಪಾಕ್ ಪ್ರತ್ಯುತ್ತರ ಕೊಡುವ ತಾಕತ್ತಿನಲ್ಲಂತೂ ಇಲ್ಲ. ಆದ್ರೆ ಚೀನೀಯರ ಕುಮ್ಮಕ್ಕಿನಿಂದ ಬಾಲ ಬಿಚ್ಚೋ ಧೈರ್ಯ ತೋರಿದ್ರೆ ನಿಂತಲ್ಲೇ ಹೊಸಕಿಹಾಕಲು ಭಾರತವೂ ಸರ್ವಸನ್ನದ್ದವಾಗಿದೆ. ಪಾಕಿನ ಪ್ರತಿ ಚಲನವಲನದ ಮೇಲೆ ನಿಗಾ ಇಟ್ಟಿರೋ ಭಾರತ ಗಡಿಯಲ್ಲಿ ಮಿರಾಜ್, ಸುಖೋಯ್ ನಂಥಾ ಬಲ ಭೀಮರನ್ನು ಕಾವಲಿಗೆ ಹಚ್ಚಿದೆ. ಇತ್ತ ಗಡಿ ದಾಟಿ ಬರೋ ಧಮ್ಮು ತೋರಿದ್ರೆ, ಬಾನಂಗಳಕ್ಕೆ ಭಾರತ ಬ್ರಹ್ಮೋಸ್ ಕ್ಷಿಪಣಿಯೇ ನೆಗೆಯಲಿದೆ. ಹಾಗೊಮ್ಮೆ ಕಾಲ್ಕೆರೆದು ಜಗಳಕ್ಕೇನಾದ್ರು ಪಾಕ್ ಮುಂದಾದ್ರೆ ಆಪರೇಷನ್ ಸಿಂಧೂರ ಪಾರ್ಟ್ 2 ಸ್ಕೆಚ್ ಸಿದ್ಧವಿದೆ. ಆದ್ರೆ ಇದೇನಾದ್ರು ಘಟಿಸಿದ್ರೆ ವಿಶ್ವ ಭೂಪಟದಿಂದ ಪಾಕ್ ಸರ್ವನಾಶವಾಗೋದು ಶತಸಿದ್ಧ.