ಹರಹರ ಮಹದೇವ್…..ಬೋಲೋ ಭಾರತ್ ಮಾತಾಕಿ ಜೈ…..ಪ್ರತಿ ಭಾರತೀಯನ ಯುದ್ಧೋತ್ಸಾಹಕ್ಕೆ ಅಲ್ಲಿ ಮಿತಿಯೇ ಇರಲಿಲ್ಲ…ಪ್ರತೀಕಾರದ ರೋಷಾಗ್ನಿ ಕುದಿಯುತ್ತಿತ್ತು. 26 ಅಮಾಯಕರನ್ನು ಕೊಂದದ್ದೇ ಆಗಿರಲಿ, ಇಲ್ಲಾ ಪಠಾಣ್ ಕೋಟ್ ನಲ್ಲಿ ತಮ್ಮ ಸಹೋದರರ ಕತ್ತು ಸೀಳಿದ್ದೇ ಇರಲಿ, ಎಲ್ಲದಕ್ಕೂ ಹಗೆ ತೀರಿಸಿಕೊಳ್ಳಬೇಕಿತ್ತು.
ಕಡೆಗೂ ಪ್ರತಿ ಭಾರತೀಯ ಸೇನಾನಿಯ ಕನಸು ಈಡೇರಿದೆ. ಮಾತುಕತೆ ಬದಿಗಿಟ್ಟು ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವ ದಿಟ್ಟ ನಿರ್ಧಾರಕ್ಕೆ ಯೋಧರ ಪ್ರತಿ ಹನಿ ರಕ್ತವೂ ಅಭಿನಂದನೆ ಹೇಳುತ್ತಿತ್ತು. ಇದೇ ಉತ್ಸಾಹ, ಪಾಕಿಸ್ತಾನಿಗಳ ಮೇಲೆ ಬೆಂಕಿಯುಂಡೆಯಾಗಿ ಚಿಮ್ಮಿದ್ದು ಸುಳ್ಳಲ್ಲ.
ಪಾಕಿಸ್ತಾನದ ಮೇಲೆರಗಿದ ಭಾರತದ ಬಾಹುಬಲಿ ಕ್ಷಿಪಣಿ
ಭಾರತದ ಪಂಜಾಬ್, ರಾಜಸ್ಥಾನ, ಜಮ್ಮುವನ್ನು ಟಾರ್ಗೆಟ್ ಮಾಡಿ ಪಾಕಿಸ್ತಾನ ಆತ್ಮಾಹುತಿ ಡ್ರೋನ್ ದಾಳಿ ಆರಂಭಿಸಿತ್ತು. 50ಕ್ಕೂ ಹೆಚ್ಚು ಡ್ರೋನ್ ಗಳು ಗಡಿ ದಾಟಿ ಬರ್ತಿದ್ದಂತೆ ಭಾರತದ ಏರ್ ಡಿಫೆನ್ಸ್ ಸಿಸ್ಟಂ ತನ್ನ ಕಾರ್ಯಾರಂಭಿಸಿದೆ. ಅಷ್ಟೇ ನೋಡ ನೋಡುತ್ತಿದ್ದಂತೆ 50ಕ್ಕೂ ಹೆಚ್ಚು ಪಾಕ್ ಡ್ರೋನ್ ಗಳು ಸುಟ್ಟು ಕರಕಲಾಗಿವೆ. ಅಷ್ಟೇ ಅಲ್ಲಾ ರಷ್ಯಾ ನಿರ್ಮಿತ ಖಂಡಾಂತರ ಕ್ಷಿಪಣಿಗಳು ಬಾನಿಗೆ ನೆಗೆಯಲು ಆರಂಭಿಸಿದ್ದವು.
ಇತ್ತ ಗಡಿಯಲ್ಲಿ ವೀರ ತಿಲಕವಿಟ್ಟುಕೊಂಡು ಸಜ್ಜಾಗಿ ನಿಂತಿದ್ದ ಗಡಿ ಭದ್ರತಾ ಪಡೆಯ ನೂರಾರು ಯೋಧರು ಏಕಕಾಲಕ್ಕೆ ಅಂತಾರಾಷ್ಟ್ರಿಯ ಗಡಿ ಮೂಲಕ ಪಾಕ್ ನೊಳಗೆ ಲಗ್ಗೆಯಿಟ್ಟಿದ್ರು. ಅಲ್ಲಿಗೆ ಪಾಕಿಸ್ತಾನದ ಸಮಾಧಿ ಚರಣ ಆರಂಭವಾಗಿತ್ತು.
ಐಎನ್ ಎಸ್ ವಿಕ್ರಾಂತ್ ವೀರಾವೇಶಕ್ಕೆ ಪಾಕ್ ತತ್ತರ್ ಬಿತ್ತರ್
ಇತ್ತ ಇಸ್ಲೇಲ್ ನಿರ್ಮಿತ ಕಣ್ಗಾವಲು ಪಾಕ್ ಡ್ರೋನ್ ಗಳನ್ನು ನೆಲಕ್ಕುರುಳಿಸುವ ಕೆಲಸ ನಡೆಸಿದ್ದವು. ಅತ್ತ ಬಿಎಸ್ ಎಫ್ ಯೋಧರು ಮರಣಚರಣ ಬರೆದಿದ್ದರು. ಇನ್ನೊಂದೆಡೆ, ಅರಬ್ಬಿ ಸಮುದ್ರದಲ್ಲಿ ಕಾವಲಿಗೆ ನಿಂತಿದ್ದ ಐಎನ್ ಎಸ್ ವಿಕ್ರಾಂತ್ ಇದೇ ಮೊದಲ ಬಾರಿ ಸಮರ ಕಣ ಪ್ರವೇಶಿಸಿತ್ತು. ಪಾಕಿಸ್ತಾನದ ಇಸ್ಲಾಮಾಬಾದ್, ರಾವಲ್ಪಿಂಡಿ, ಲಾಹೋರ್, ಕರಾಚಿ ನಗರಗಳನ್ನು ಗುರಿಯಾಗಿಸಿ ಮಿಸೈಲ್ ಗಳನ್ನು ಲಾಂಚ್ ಮಾಡಿತ್ತು.
ಕ್ಷಣಾರ್ಧದಲ್ಲೇ ಇಸ್ಲಾಮಾಬಾದ್ ನ ಪಾಕ್ ಸೇನೆ ಕೇಂದ್ರ ಕಚೇರಿ ಮಗ್ಗುಲಲ್ಲೇ ಕ್ಷಿಪಣಿ ಅಪ್ಪಳಿಸಿತ್ತು. ಲಾಹೋರ್ ನ ಪ್ರಮುಖ ಮಾರುಕಟ್ಟೆಗಳು, ಮೈದಾನಗಳು, ಕರಾಚಿಯ ನೌಕಾಪಡೆ ಕೇಂದ್ರ ಕಚೇರಿಗಳು ಕಣ್ಬಿಟ್ಟು ತೆಗೆಯೋದ್ರೊಳಗಾಗಿ ಛಿದ್ರವಾಗಿ ಹೋಗಿದ್ವು. ಅಷ್ಟೇ ಅಲ್ಲಾ ಭಾರತದ ಡ್ರೋನ್ ದಾಳಿಗೆ ಇಸ್ಲಾಮಾಬಾದ್ ನಲ್ಲಿರುವ ಪಾಕ್ ನ ಮಿಸೈಲ್ ರೆಡಾರ್ ವ್ಯವಸ್ಥೆಯೇ ಧೂಳೀಪಟವಾಗಿಬಿಡ್ತು. ಅಲ್ಲಿಗೆ ಮಾಡಿದ ತಪ್ಪಿಗೆ ಪಾಕ್ ಬೆಲೆ ತೆತ್ತಾಗಿತ್ತು. ಭಾರತದ ದಾಳಿಗೆ ಮೂವರು ಪ್ರಾಣತೆತ್ತಿದ್ರೆ, ಪಾಕ್ ಸರ್ವನಾಶದ ಅಂಚಿಗೆ ಜಾರುತ್ತಿದೆ.