ಕೋಲಾರ: ನನ್ನ ಪ್ರಾಣಕ್ಕೆ ಹಾನಿಯಾದರೆ ರಮೇಶ್ ಕುಮಾರ್ ನೇರ ಹೊಣೆ ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ್ಯ ಗೋವಿಂದಗೌಡ ಕಣ್ಣೀರಿಟ್ಟಿದ್ದಾರೆ.
ಚುನಾವಣಾ ಫಲಿತಾಂಶ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ, ನನ್ನ ತಾಯಿಯ ಬಗ್ಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ನನ್ನ ಪ್ರಾಣಕ್ಕೆ ಹಾನಿಯಾದರೆ ರಮೇಶ್ ಕುಮಾರ್ ಹೊಣೆ ನನ್ನ ಮೇಲೆ ಜನರನ್ನ ಎತ್ತಿಕಟ್ಟಿದ್ದಾರೆ, ಘೋಷಣೆ ಕೂಗಲು ಪ್ರಚೋದನೆ ಮಾಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಮೇಶ್ ಕುಮಾರ್ ಸೋಲಿಗೆ ನಾನು ಕಾರಣವಲ್ಲ ಆದರೂ ಕೂಡ ವಿನಾಕಾರಣ ನನ್ನ ವಿರುದ್ದ ಅಪಪ್ರಚಾರ, ತೇಜೋವಧೆ ಮಾಡಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಗೋವಿಂದೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.