ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ನಾನಿಲ್ಲದೇ ಇರುತ್ತಿದ್ದರೆ ಟ್ರಂಪ್ ಗೆಲ್ಲುತ್ತಲೇ ಇರಲಿಲ್ಲ: ಟ್ರಂಪ್ ವಿರುದ್ಧ ತಿರುಗಿಬಿದ್ದ ಮಸ್ಕ್!

June 6, 2025
Share on WhatsappShare on FacebookShare on Twitter


ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉದ್ಯಮಿ ಎಲಾನ್ ಮಸ್ಕ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿರುವ ವದಂತಿಗೆ ಪುಷ್ಟಿ ನೀಡುವಂತೆ, “ನಾನು ಇಲ್ಲದೇ ಇರುತ್ತಿದ್ದರೆ ಟ್ರಂಪ್ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುತ್ತಲೇ ಇರಲಿಲ್ಲ” ಎಂಬ ಅಚ್ಚರಿಯ ಹೇಳಿಕೆಯನ್ನು ಮಸ್ಕ್ ನೀಡಿದ್ದಾರೆ.

ಟ್ರಂಪ್‌ ಘೋಷಿಸಿರುವ “ಒನ್ ಬಿಗ್ ಬ್ಯೂಟಿಫುಲ್ ಬಿಲ್” ಎಂಬ ತೆರಿಗೆ ಮತ್ತು ವೆಚ್ಚದ ಮಸೂದೆಯ ಕುರಿತು ಇಬ್ಬರು ನಡುವೆ ಆರಂಭವಾಗಿರುವ ಭಿನ್ನಾಭಿಪ್ರಾಯದ ಬೆನ್ನಲ್ಲೇ ಟ್ರಂಪ್ ಮತ್ತು ಮಸ್ಕ್ ನಡುವೆ ವಾಗ್ವಾದ ತಾರಕಕ್ಕೇರಿದೆ. ಈ ಮಸೂದೆಯು ತೆರಿಗೆ ಕಡಿತಗಳು ಮತ್ತು ರಾಷ್ಟ್ರೀಯ ಸಾಲದ ಮಿತಿಯನ್ನು ಏರಿಸುವಂತಹ ಅಂಶಗಳನ್ನು ಒಳಗೊಂಡಿದೆ. ಈ ಮಸೂದೆಯನ್ನು ಮಸ್ಕ್ ಕಟು ಪದಗಳಿಂದ ವಿರೋಧಿಸಿದ್ದಾರೆ. ಆದರೆ, ಟ್ರಂಪ್ ಈ ನೀತಿಯನ್ನು ಸಮರ್ಥಿಸಿಕೊಂಡು ಬಂದಿದ್ದಾರೆ.

ವಿವಾದದ ಹಿನ್ನೆಲೆ
ಡೊನಾಲ್ಡ್ ಟ್ರಂಪ್ ಅವರು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್‌ರೊಂದಿಗಿನ ಮಾತುಕತೆ ವೇಳೆ, ಈ ಮಸೂದೆ ಕುರಿತು ಎಲಾನ್ ಮಸ್ಕ್‌ರವರ ಟೀಕೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. “ನಾನು ಎಲಾನ್‌ಗೆ ಬಹಳ ಸಹಾಯ ಮಾಡಿದ್ದೇನೆ. ಆದರೆ ಈಗ ಅವರು ಈ ಮಸೂದೆಯ ವಿಚಾರದಲ್ಲಿ ನನ್ನನ್ನು ಟೀಕಿಸತೊಡಗಿದ್ದಾರೆ. ಈ ಮಸೂದೆಯಿಂದ ಎಲೆಕ್ಟ್ರಿಕ್ ವಾಹನ (EV) ತೆರಿಗೆ ಕ್ರೆಡಿಟ್‌ಗಳನ್ನು ಕಡಿತಗೊಳಿಸಿರುವುದು ಮಸ್ಕ್‌ರ ಟೆಸ್ಲಾ ಕಂಪನಿಗೆ ದೊಡ್ಡ ಹೊಡೆತವಾಗಿದೆ” ಎಂದು ಟ್ರಂಪ್ ಹೇಳಿದ್ದಾರೆ. ಅಲ್ಲದೇ, ಎಲಾನ್‌ ಅವರು ಶಿಫಾರಸು ಮಾಡಿದ್ದ ಜಾರೆಡ್ ಐಸಾಕ್‌ಮನ್‌ರನ್ನು ನಾನು ನಾಸಾದ ಮುಖ್ಯಸ್ಥ ಸ್ಥಾನಕ್ಕೆ ನೇಮಕ ಮಾಡದಿರುವುದು ಕೂಡ ಮಸ್ಕ್ ಅವರ ಸಿಟ್ಟಿಗೆ ಕಾರಣ ಎಂದೂ ಟ್ರಂಪ್ ಟೀಕಿಸಿದ್ದಾರೆ.

ಮಸ್ಕ್‌ ತಿರುಗೇಟು
ಟ್ರಂಪ್ ಅವರಿಂದ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಸಿಟ್ಟಾದ ಮಸ್ಕ್, ತಕ್ಷಣವೇ ತಮ್ಮ ಎಕ್ಸ್ ಖಾತೆಯಲ್ಲಿ ಟ್ರಂಪ್‌ರ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. “ನಾನು ಇಲ್ಲದೇ ಇರುತ್ತಿದ್ದರೆ ಟ್ರಂಪ್ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಣ್ಣುತ್ತಿದ್ದರು. ಅಮೆರಿಕದ ಸಂಸತ್‌ನ ನಿಯಂತ್ರಣವು ಡೆಮಾಕ್ರಾಟ್‌ಗಳ ಕೈಗೆ ಹೋಗುತ್ತಿತ್ತು. ರಿಪಬ್ಲಿಕನ್‌ಗಳು ಸೆನೆಟ್‌ನಲ್ಲಿ 51-49ರ ಬಹುಮತವನ್ನು ಹೊಂದಿರುತ್ತಿದ್ದರು,” ಎಂದು ಮಸ್ಕ್ ಬರೆದುಕೊಂಡಿದ್ದಾರೆ. ಜತೆಗೆ “ಟ್ರಂಪ್ ಒಬ್ಬ ಕೃತಘ್ನ ವ್ಯಕ್ತಿ!” ಎಂದೂ ಅವರು ಟೀಕಿಸಿದ್ದಾರೆ. ನಾನು 2024ರ ಚುನಾವಣೆಯಲ್ಲಿ ಟ್ರಂಪ್‌ ಅವರನ್ನು ಬೆಂಬಲಿಸಿ ಸುಮಾರು 290 ಮಿಲಿಯನ್‌ ಡಾಲರ್ ಗಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದೇನೆ. ಇದು ಚುನಾವಣೆಯ ಫಲಿತಾಂಶದ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರಿತ್ತು ಎಂದೂ ಮಸ್ಕ್ ವಾದಿಸಿದ್ದಾರೆ.

ಅಲ್ಲದೇ, ಟ್ರಂಪ್ ತಂದಿರುವ ಈ ಮಸೂದೆಯನ್ನು “ಅಸಹ್ಯಕರ ದುರಂತ” ಎಂದು ಬಣ್ಣಿಸಿರುವ ಮಸ್ಕ್, ಇದು ರಾಷ್ಟ್ರೀಯ ಸಾಲವನ್ನು $2.4 ಟ್ರಿಲಿಯನ್‌ನಷ್ಟು ಹೆಚ್ಚಿಸುತ್ತದೆ ಎಂದು ಎಚ್ಚರಿಸಿದ್ದಾರೆ. “ಈ ಮಸೂದೆಯನ್ನು ಟ್ರಂಪ್ ನನಗೆ ಒಮ್ಮೆಯೂ ತೋರಿಸಲಿಲ್ಲ, ಇದನ್ನು ರಾತ್ರೋರಾತ್ರಿ ತ್ವರಿತವಾಗಿ ಅಂಗೀಕರಿಸಲಾಯಿತು. ಯಾರಿಗೂ ಓದಲು ಸಮಯವೂ ಇರಲಿಲ್ಲ,” ಎಂದೂ ಆರೋಪಿಸಿದ್ದಾರೆ.

ಇದರ ಬೆನ್ನಲ್ಲೇ ಟ್ರಂಪ್‌ ತಮ್ಮ ಟ್ರೂತ್ ಸೋಶಿಯಲ್ ಮೀಡಿಯಾದಲ್ಲಿ ಮಸ್ಕ್‌ ಅವರನ್ನು ” ಹುಚ್ಚ” (ಕ್ರೇಜಿ) ಎಂದು ಕರೆದಿದ್ದಲ್ಲದೆ, “ನಾನು ಎಲಾನ್‌ ಮಸ್ಕ್ ಅವರಿಗೆ ನೀಡಿರುವ ಸರ್ಕಾರಿ ಸಬ್ಸಿಡಿಗಳು ಮತ್ತು ಒಪ್ಪಂದಗಳನ್ನು ಕೊನೆಗೊಳಿಸಿದರೆ, ದೇಶದ ಬಜೆಟ್‌ನಲ್ಲಿ ಬಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಉಳಿಸಬಹುದು,” ಎಂದು ಬೆದರಿಕೆ ಹಾಕುವ ರೀತಿ ಹೇಳಿದ್ದಾರೆ. ಇದಕ್ಕೆ ಮಸ್ಕ್, “ಇದು ಇನ್ನೂ ರೋಚಕವಾಗುತ್ತಿದೆ, ಮಾಡಿ ತೋರಿಸಿ!” ಎಂದು ತಿರುಗೇಟು ನೀಡಿದ್ದಾರೆ. ಇವರಿಬ್ಬರ ಜಗಳವು ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

Tags: AmericaOne Big Beautiful BillPoliticianTaxTrump
SendShareTweet
Previous Post

ಶೀಘ್ರವೇ ಪಿಎಂ ಕಿಸಾನ್ ಹಣ ಬಿಡುಗಡೆ: ಇ-ಕೆವೈಸಿ ಹೀಗೆ ಪೂರ್ಣಗೊಳಿಸಿ

Next Post

ನಾನು, ದೀಪಿಕಾ ಪಡುಕೋಣೆ 2 ವರ್ಷ ರಿಲೇಷನ್‌ಶಿಪ್‌ನಲ್ಲಿದ್ದೆವು: ಮುಜಮ್ಮಿಲ್ ಇಬ್ರಾಹಿಂ

Related Posts

ಪಂಜಾಬ್‌ನ ಯೂಟ್ಯೂಬರ್​ ಕೆನಡಾದಲ್ಲಿ ಹತ್ಯೆ!
ವಿದೇಶ

ಪಂಜಾಬ್‌ನ ಯೂಟ್ಯೂಬರ್​ ಕೆನಡಾದಲ್ಲಿ ಹತ್ಯೆ!

ಟ್ರಂಪ್, ಬೈಡನ್ ಹತ್ಯೆಗೆ ಇರಾನ್ ನನ್ನನ್ನು ನೇಮಿಸಿಕೊಂಡಿತ್ತು – ಅಮೆರಿಕದಲ್ಲಿ ಪಾಕ್‌ ಪ್ರಜೆಯ ಸ್ಫೋಟಕ ಸಾಕ್ಷ್ಯ!
ವಿದೇಶ

ಟ್ರಂಪ್, ಬೈಡನ್ ಹತ್ಯೆಗೆ ಇರಾನ್ ನನ್ನನ್ನು ನೇಮಿಸಿಕೊಂಡಿತ್ತು – ಅಮೆರಿಕದಲ್ಲಿ ಪಾಕ್‌ ಪ್ರಜೆಯ ಸ್ಫೋಟಕ ಸಾಕ್ಷ್ಯ!

ನಿಜವಾಯ್ತು ‘ಚೀನಾದ ನಾಸ್ಟ್ರಾಡಾಮಸ್’ ಭವಿಷ್ಯ.. 3ನೇ ಭವಿಷ್ಯವಾಣಿಯೂ ನಿಜವಾಗುತ್ತಾ?
ವಿದೇಶ

ನಿಜವಾಯ್ತು ‘ಚೀನಾದ ನಾಸ್ಟ್ರಾಡಾಮಸ್’ ಭವಿಷ್ಯ.. 3ನೇ ಭವಿಷ್ಯವಾಣಿಯೂ ನಿಜವಾಗುತ್ತಾ?

ಟ್ರಂಪ್‌ಗೆ ಅಮೆರಿಕ ಕೋರ್ಟ್ ಬಿಗ್ ಶಾಕ್ | 10 ಲಕ್ಷ ಕೋಟಿ ರೂ.ಗೂ ಅಧಿಕ ಅಕ್ರಮ ಸುಂಕ ಮರುಪಾವತಿಗೆ ಆದೇಶ!
ವಿದೇಶ

ಟ್ರಂಪ್‌ಗೆ ಅಮೆರಿಕ ಕೋರ್ಟ್ ಬಿಗ್ ಶಾಕ್ | 10 ಲಕ್ಷ ಕೋಟಿ ರೂ.ಗೂ ಅಧಿಕ ಅಕ್ರಮ ಸುಂಕ ಮರುಪಾವತಿಗೆ ಆದೇಶ!

“ಇರಾನ್ ಮೇಲೆ ದಾಳಿಗೆ ಭಾರತದ ನೌಕಾನೆಲೆ ಬಳಕೆ” ಎಂದ ಅಮೆರಿಕದ ಮಾಜಿ ಅಧಿಕಾರಿ.. ಹಸಿ ಸುಳ್ಳು ಎಂದ ವಿದೇಶಾಂಗ ಇಲಾಖೆ!
ವಿದೇಶ

“ಇರಾನ್ ಮೇಲೆ ದಾಳಿಗೆ ಭಾರತದ ನೌಕಾನೆಲೆ ಬಳಕೆ” ಎಂದ ಅಮೆರಿಕದ ಮಾಜಿ ಅಧಿಕಾರಿ.. ಹಸಿ ಸುಳ್ಳು ಎಂದ ವಿದೇಶಾಂಗ ಇಲಾಖೆ!

ಶ್ರೀಲಂಕಾ ಕಡಲ ತೀರದಲ್ಲಿ ಇರಾನ್ ಯುದ್ಧನೌಕೆ ಮುಳುಗಿಸಿದ ಅಮೆರಿಕ | ಭಾರತಕ್ಕೂ ಆತಂಕ
ವಿದೇಶ

ಶ್ರೀಲಂಕಾ ಕಡಲ ತೀರದಲ್ಲಿ ಇರಾನ್ ಯುದ್ಧನೌಕೆ ಮುಳುಗಿಸಿದ ಅಮೆರಿಕ | ಭಾರತಕ್ಕೂ ಆತಂಕ

Next Post
ನಾನು, ದೀಪಿಕಾ ಪಡುಕೋಣೆ 2 ವರ್ಷ ರಿಲೇಷನ್‌ಶಿಪ್‌ನಲ್ಲಿದ್ದೆವು: ಮುಜಮ್ಮಿಲ್ ಇಬ್ರಾಹಿಂ

ನಾನು, ದೀಪಿಕಾ ಪಡುಕೋಣೆ 2 ವರ್ಷ ರಿಲೇಷನ್‌ಶಿಪ್‌ನಲ್ಲಿದ್ದೆವು: ಮುಜಮ್ಮಿಲ್ ಇಬ್ರಾಹಿಂ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಇಂದು ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಬಜೆಟ್ ಮಂಡನೆ ನೇರ ಪ್ರಸಾರ | ಪ್ರಯಾಣಿಕರಿಗೆ ವಿಶೇಷ ವೀಕ್ಷಣಾ ವ್ಯವಸ್ಥೆ

ಇಂದು ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಬಜೆಟ್ ಮಂಡನೆ ನೇರ ಪ್ರಸಾರ | ಪ್ರಯಾಣಿಕರಿಗೆ ವಿಶೇಷ ವೀಕ್ಷಣಾ ವ್ಯವಸ್ಥೆ

ರಾಜ್ಯಾದ್ಯಂತ ಲೋಕಾಯುಕ್ತ ರೇಡ್ | ಭ್ರಷ್ಟ ಅಧಿಕಾರಿಗಳಿಂದ ₹35.65 ಕೋಟಿ ಆಸ್ತಿ ಜಪ್ತಿ

ರಾಜ್ಯಾದ್ಯಂತ ಲೋಕಾಯುಕ್ತ ರೇಡ್ | ಭ್ರಷ್ಟ ಅಧಿಕಾರಿಗಳಿಂದ ₹35.65 ಕೋಟಿ ಆಸ್ತಿ ಜಪ್ತಿ

ಹೋರಾಡಿ ಸೋತ ಇಂಗ್ಲೆಂಡ್.. ರೋಚಕ ಹಣಾಹಣಿಯಲ್ಲಿ ಗೆದ್ದು ಟಿ20 ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಭಾರತ!

ಹೋರಾಡಿ ಸೋತ ಇಂಗ್ಲೆಂಡ್.. ರೋಚಕ ಹಣಾಹಣಿಯಲ್ಲಿ ಗೆದ್ದು ಟಿ20 ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಭಾರತ!

ಮಹಿಳಾ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ‘ಮಹಾ ಜನ್ ಸುನ್ವಾಯಿ’ ಅಭಿಯಾನ!

ಮಹಿಳಾ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ‘ಮಹಾ ಜನ್ ಸುನ್ವಾಯಿ’ ಅಭಿಯಾನ!

Recent News

ಇಂದು ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಬಜೆಟ್ ಮಂಡನೆ ನೇರ ಪ್ರಸಾರ | ಪ್ರಯಾಣಿಕರಿಗೆ ವಿಶೇಷ ವೀಕ್ಷಣಾ ವ್ಯವಸ್ಥೆ

ಇಂದು ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಬಜೆಟ್ ಮಂಡನೆ ನೇರ ಪ್ರಸಾರ | ಪ್ರಯಾಣಿಕರಿಗೆ ವಿಶೇಷ ವೀಕ್ಷಣಾ ವ್ಯವಸ್ಥೆ

ರಾಜ್ಯಾದ್ಯಂತ ಲೋಕಾಯುಕ್ತ ರೇಡ್ | ಭ್ರಷ್ಟ ಅಧಿಕಾರಿಗಳಿಂದ ₹35.65 ಕೋಟಿ ಆಸ್ತಿ ಜಪ್ತಿ

ರಾಜ್ಯಾದ್ಯಂತ ಲೋಕಾಯುಕ್ತ ರೇಡ್ | ಭ್ರಷ್ಟ ಅಧಿಕಾರಿಗಳಿಂದ ₹35.65 ಕೋಟಿ ಆಸ್ತಿ ಜಪ್ತಿ

ಹೋರಾಡಿ ಸೋತ ಇಂಗ್ಲೆಂಡ್.. ರೋಚಕ ಹಣಾಹಣಿಯಲ್ಲಿ ಗೆದ್ದು ಟಿ20 ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಭಾರತ!

ಹೋರಾಡಿ ಸೋತ ಇಂಗ್ಲೆಂಡ್.. ರೋಚಕ ಹಣಾಹಣಿಯಲ್ಲಿ ಗೆದ್ದು ಟಿ20 ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಭಾರತ!

ಮಹಿಳಾ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ‘ಮಹಾ ಜನ್ ಸುನ್ವಾಯಿ’ ಅಭಿಯಾನ!

ಮಹಿಳಾ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ‘ಮಹಾ ಜನ್ ಸುನ್ವಾಯಿ’ ಅಭಿಯಾನ!

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಇಂದು ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಬಜೆಟ್ ಮಂಡನೆ ನೇರ ಪ್ರಸಾರ | ಪ್ರಯಾಣಿಕರಿಗೆ ವಿಶೇಷ ವೀಕ್ಷಣಾ ವ್ಯವಸ್ಥೆ

ಇಂದು ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಬಜೆಟ್ ಮಂಡನೆ ನೇರ ಪ್ರಸಾರ | ಪ್ರಯಾಣಿಕರಿಗೆ ವಿಶೇಷ ವೀಕ್ಷಣಾ ವ್ಯವಸ್ಥೆ

ರಾಜ್ಯಾದ್ಯಂತ ಲೋಕಾಯುಕ್ತ ರೇಡ್ | ಭ್ರಷ್ಟ ಅಧಿಕಾರಿಗಳಿಂದ ₹35.65 ಕೋಟಿ ಆಸ್ತಿ ಜಪ್ತಿ

ರಾಜ್ಯಾದ್ಯಂತ ಲೋಕಾಯುಕ್ತ ರೇಡ್ | ಭ್ರಷ್ಟ ಅಧಿಕಾರಿಗಳಿಂದ ₹35.65 ಕೋಟಿ ಆಸ್ತಿ ಜಪ್ತಿ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat