ಹಾಸನ: ಬಡ್ಡಿ ಸಮೇತ ವಿರೋಧಿಗಳಿಗೆ ಉತ್ತರ ನೀಡದಿದ್ದರೆ ನಾನು ದೇವೇಗೌಡರ(H.D Devegowda) ಮಗನೇ ಅಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಹೇಳಿದ್ದಾರೆ.
ಹಾಸನದ (Hassan) ದ್ಯಾಪಲಾಪುರ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ಹೇಳ್ತಾರೆ ದೇವೇಗೌಡರದು, ರೇವಣ್ಣ ಅವರದ್ದು ಮುಗಿತು ಅಂತಾರೆ. ಅಧಿಕಾರಿಗಳು ರೇವಣ್ಣ ಹಾಗೂ ದೇವೇಗೌಡರದು ಮುಗೀತು ಎಂದು ತಿಳಿದುಕೊಂಡಿದ್ದಾರೆ. ಹಿಂದೆ ಕೂಡ ದೇವೇಗೌಡರ ಎಲ್ಲ ಸ್ಥಾನಗಳನ್ನು ಕಳೆದುಕೊಂಡ ನಂತರ ಮತ್ತೆ ಅಧಿಕಾರಕ್ಕೆ ಬಂದಿದ್ದರು. ರೈಲ್ವೆ ಯೋಜನೆ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು, ನಸಿರ್ಂಗ್ ಕಾಲೇಜು ಮಾಡಿದ್ದು ಯಾರು? ಹಾಸನ ಜಿಲ್ಲೆಯ ಶಿಕ್ಷಣಕ್ಕೆ ಕುಮಾರಸ್ವಾಮಿ ಐದು ಸಾವಿರ ಕೋಟಿ ರೂ. ಕೊಟ್ಟಿದ್ದರು ಎಂದು ಗುಡುಗಿದ್ದಾರೆ.
ನಾನು ಎಲ್ಲಿಯೂ ಹೋಗಲ್ಲ. ಇಲ್ಲಿಯೇ ಇರುತ್ತೇನೆ. ಬಡ್ಡಿ ಸಮೇತ ವಿರೋಧಿಗಳಿಗೆ ಉತ್ತರ ನೀಡುದತ್ತೇನೆ ಎಂದಿದ್ದಾರೆ.