ಕೋಲಾರ: ಪಾಕಿಸ್ತಾನದಲ್ಲಿ ಗೌರವ ಡಾಕ್ಟರೇಟ್ ಪದವಿ ಕೊಟ್ಟರೆ, ಅದು ನಮ್ಮ ಸಿಎಂಗೆ ಸಿಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ನರಮೇಧವಾಗುತ್ತಿದೆ. ಆ ಘಟನೆಯಲ್ಲಿ ಶಾಸಕರ ಪತ್ನಿಯೋ, ಸಚಿವರ ಪತ್ನಿಯೋ, ಮಕ್ಕಳ ಪತ್ನಿಯೋ ಸತ್ತಿದ್ದರೆ ಅದರ ನೋವು ಅರ್ಥವಾಗುತ್ತಿತ್ತು. ಪಾಕಿಸ್ತಾನದ ಮೇಲೆ ಯದ್ದ ಆಗಲೇಬೇಕು. ಆಗಲೇ ಅವರ ಉಪಟಳ ನಿಲ್ಲುವುದು. ಹಿಂದೂಗಳನ್ನೇ ಗುರಿಯಾಗಿಸಿ ಉಗ್ರರು ಹತ್ಯೆ ಮಾಡಿದ್ದಾರೆ. ಈ ಕೃತ್ಯಕ್ಕೆ ಪ್ರತ್ಯುತ್ತರ ನೀಡಲೇಬೇಕು.
ಸಿಎಂ ಸಿದ್ದರಾಮಯ್ಯ ಒಂದು ಸಮಾಜ ಮೆಚ್ಚಿಸುವ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕುರ್ಚಿ ಉಳಿಸಿಕೊಳ್ಳಿವ ಸರ್ಕಸ್ ನಡೆಯುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಜುನಾಥ್ ಕಿಡಿಕಾರಿದ್ದಾರೆ.