ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಕ್ಕೆ ಮುಂಚಿತವಾಗಿ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇಂಡಿಯನ್ ಎಕ್ಸ್ಪ್ರೆಸ್ ಮಾಡಿರುವ ವರದಿಗಳ ಪ್ರಕಾರ, ಭಾರತತ ತಂಡದ ಪ್ರಧಾನ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನಿಂದಾಗಿ ಪಂದ್ಯಾವಳಿಯ ಲೀಗ್ ಹಂತದಿಂದ ಹೊರಗುಳಿಯಲಿದ್ದಾರೆ.
ಜಸ್ಪ್ರೀತ್ ಬುಮ್ರಾ ಈಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ತೆರಳಲಿದ್ದಾರೆ. ಅಲ್ಲಿ ಅವರನ್ನು ಮೇಲ್ವಿಚಾರಣೆ ಮಾಡಲಾಗುವುದು ಮತ್ತು ಅವರು ಪುನಶ್ಚೇತನ ಪ್ರಾರಂಭಿಸಲಿದ್ದಾರೆ. ರಾಷ್ಟ್ರೀಯ ಆಯ್ಕೆದಾರರು ವೇಗದ ಬೌಲರ್ ಬಗ್ಗೆ ಸ್ಪಷ್ಟ ಚಿತ್ರಣವನ್ನು ಪಡೆದಿದ್ದಾರೆ. ಈಗ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಅವರ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
15 ಜನರ ತಂಡದಲ್ಲಿ ಜಸ್ಪ್ರೀತ್ ಅವರನ್ನು ಸೇರಿಸಬೇಕೆ, ಅಥವಾ ಪಂದ್ಯಾವಳಿಗೆ ಮೀಸಲು ಆಟಗಾರರ ಪಟ್ಟಿಗೆ ಸೇರಿಸಬೇಕೇ ಎಂದು ಆಯ್ಕೆದಾರರು ಚರ್ಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬಿಸಿಸಿಐ ಶೀಘ್ರದಲ್ಲೇ ತಾತ್ಕಾಲಿಕ ತಂಡವನ್ನು ಹೆಸರಿಸಲಿದ್ದು, ಫೆಬ್ರವರಿ 12 ರವರೆಗೆ ಸಮಯವಿದೆ. ಹೀಗಾಗಿ ಬುಮ್ರಾ ಅವರ ಫಿಟ್ನೆಸ್ ಬಗ್ಗೆ ಅಪ್ಡೇಟ್ ಪಡೆಯಲು ಸಮಯವಿದೆ.
ಬೆನ್ನು ನೋವಿನ ಸಮಸ್ಯೆ ಜೋರು
ಮಾರ್ಚ್ ಆರಂಭದ ವೇಳೆಗೆ ಜಸ್ಪ್ರೀತ್ ಬುಮ್ರಾ ಫಿಟ್ ಆಗಲಿದ್ದಾರೆ ಎಂದು ಬೆಳವಣಿಗೆಗಳಿಗೆ ಹತ್ತಿರದ ಮೂಲಗಳು ತಿಳಿಸಿವೆ. ವೇಗದ ಬೌಲರ್ಗೆ ಬೆನ್ನುನೋವು ಇದೆ ಎಂದು ಖಚಿತಪಡಿಸಿದ ಅವರು, ವೇಗಿ ಪುನರಾಗಮನ ಮಾಡುವ ಮೊದಲು ಅಭ್ಯಾಸ ಪಂದ್ಯಗಳನ್ನು ಸಹ ಆಡಲಿದ್ದಾರೆ ಎಂದು ಹೇಳಿದ್ದಾರೆ.
“ಅವರು (ಬುಮ್ರಾ) ತಮ್ಮ ಪುನಶ್ಚೇತನಕ್ಕಾಗಿ ಎನ್ಸಿಎ ಹೋಗಲಿದ್ದಾರೆ. ಆರಂಭಿಕ ವರದಿಯು ಅವರಿಗೆ ಮೂಳೆ ಮುರಿತವಿಲ್ಲ ಎಂದಿದೆ. ಅವರ ಬೆನ್ನಿನ ಮೇಲೆ ಊತವಿದೆ ಎಂದು ಹೇಳುತ್ತದೆ. ಆದ್ದರಿಂದ, ಎನ್ಸಿಎ ಅವರ ಚೇತರಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅವರು ಮೂರು ವಾರಗಳವರೆಗೆ ಅಲ್ಲಿಯೇ ಇರುತ್ತಾರೆ. ಅದರ ನಂತರವೂ, ಅವರು ತಮ್ಮ ಫಿಟ್ನೆಸ್ ಪರೀಕ್ಷಿಸಲು ಆಯೋಜಿಸಲಾದ ಅಭ್ಯಾಸ ಪಂದ್ಯಗಳಲ್ಲಿ ಆಡಲಿದ್ದಾರೆ. ಅವರು ಎರಡು ಪಂದ್ಯಗಳನ್ನು ಆಡಬೇಕಾಗುತ್ತದೆ, “ಎಂದು ಮೂಲಗಳು ತಿಳಿಸಿವೆ.
ಲೀಗ್ ಹಂತದಿಂದ ಹೊರಕ್ಕೆ
ಬುಮ್ರಾ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಲೀಗ್ ಹಂತದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ತಂಡವು ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಪಂದ್ಯ ಆಡಲಿದೆ. ಬುಮ್ರಾ ಆ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂಬುದೂ ಸ್ಪಷ್ಟವಾಗಿಲ್ಲ.
2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ವೇಳೆ ಬುಮ್ರಾ ಬೆನ್ನುನೋವಿಗೆ ತುತ್ತಾಗಿದ್ದರು. ಕೊನೇ ಟೆಸ್ಟ್ ಪಂದ್ಯದ ವೇಳೆ ಬೆನ್ನುನೋವಿನಿಂದ ಬಳಲುತ್ತಿದ್ದ ಅವರು ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 10 ಓವರ್ ಎಸೆದು ಮೈದಾನದಿಂದ ಹೊರನಡೆದಿದ್ದರು. ಅವರು ಎರಡನೇ ಇನ್ನಿಂಗ್ಸ್ ನಲ್ಲಿ ಬೌಲಿಂಗ್ ಮಾಡಲು ಮರಳಲಿಲ್ಲ.
ಆಸ್ಟ್ರೇಲಿಯಾದಲ್ಲಿ ನಡೆದ ಐದು ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ 150 ಕ್ಕೂ ಹೆಚ್ಚು ಓವರ್ಗಳನ್ನು ಎಸೆದಿದ್ದಾರೆ
ಅವರು ಗಾಯಗೊಳ್ಳಲು ಕಾರಣವೆಂದರೆ ಆಸ್ಟ್ರೇಲಿಯಾ ಸರಣಿಯಲ್ಲಿ ಹೆಚ್ಚಿದ ಒತ್ತಡ., ಐದು ಪಂದ್ಯಗಳಲ್ಲಿ 150 ಕ್ಕೂ ಹೆಚ್ಚು ಓವರ್ಗಳನ್ನು ಎಸೆದಿದ್ದರು. ಸರಣಿಯಲ್ಲಿ 32 ವಿಕೆಟ್ ಕಬಳಿಸುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.
ಜಸ್ಪ್ರೀತ್ ಬುಮ್ರಾ ತಮ್ಮ ಸಂಪೂರ್ಣ ಫಿಟ್ನೆಸ್ ಅನ್ನು ಮರಳಿ ಪಡೆಯಬೇಕು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಆಡುತ್ತಾರೆ ಎಂದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆಶಿಸಿದೆ