ಕೋಲಾರ: ನಮಗೆ ನಿಮ್ಮ ಪರಿಹಾರ ಬೇಡ. ಚೆಕ್ ಬೇಡ, ಹಣ ಬೇಡ. ನಮಗೆ ನಮ್ಮ ಮಗಳು ಬೇಕು. ಅವಳನ್ನು ತಂದು ಕೊಡಿ. ನಮ್ಮ ಆಸ್ತಿ-ಪಾಸ್ತಿ ಎಲ್ಲ ಮಾರಿ ನಿಮಗೆ ನಾವೇ ಹಣ ಕೊಡುತ್ತೇವೆ. ನಮಗೆ ಮಗಳನ್ನು ಕೊಡಿ ಎಂದು ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಸಹಾನ ತಂದೆ ಸುರೇಶ್ ಗೋಳಾಡಿದ್ದಾರೆ.
ಕೋಲಾರ ಜಿಲ್ಲಾಧಿಕಾರಿ, ಮೃತರ ಕುಟುಂಬಸ್ಥರಿಗೆ ಪರಿಹಾರ ವಿತರಿಸಲು ಹೋಗಿದ್ದ ಸಂದರ್ಭದಲ್ಲಿ ಈ ರೀತಿ ಗೋಳಾಡಿದ್ದಾರೆ. ಆನಂತರ ಮನವೊಲಿಸಿದ ಜಿಲ್ಲಾಧಿಕಾರಿ ಪರಿಹಾರದ ಚೆಕ್ ನೀಡಿದ್ದಾರೆ. ಕೋಲಾರ ಮೂಲದ ಟೆಕ್ಕಿ ಸಹನಾ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು.
ಮೃತರ ಕುಟುಂಬಸ್ಥರಿಗೆ ಸರ್ಕಾರ 25 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಪರಿಹಾರದ ಚೆಕ್ ವಿತರಿಸಲು ಜಿಲ್ಲಾಧಿಕಾರಿಗಳು, ಕೋಲಾರ ನಗರದ ಎಸ್.ಜಿ.ಲೇಔಟ್ಗೆ ತೆರಳಿದ್ದರು. ಈ ವೇಳೆ ಸಹನಾ ತಂದೆ, ಜಿಲ್ಲಾಧಿಕಾರಿಗಳ ಎದುರು ಕಣ್ಣೀರಿಟ್ಟಿದ್ದಾರೆ.