ಬೆಳಗಾವಿ: ಜಿಲ್ಲೆಯ ಹಿರೇಬಾಗೇವಾಡಿ ಹತ್ತಿರದ ಕಮಕಾರಟ್ಟಿ ಘಾಟ್ ನಲ್ಲಿ (Kamakaratti Ghat) ಸರಣಿ ಅಪಘಾತ (Serial Accident) ಸಂಭವಿಸಿರುವ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ನಾಲ್ಕು ಬೆಂಗಳೂರು ಪುಣೆ ಹೆದ್ದಾರಿಯಲ್ಲಿ (Bengaluru -Pune Highway) ಈ ಘಟನೆ ನಡೆದಿದೆ. ಮೂರು ಸಾರಿಗೆ ಬಸ್, ಮೂರು ಲಾರಿ, ಒಂದು ಬೈಕ್ ಹಾಗೂ ಕಂಟೇನರ್ ವಾಹನದ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಘಟನೆಯಲ್ಲಿ ಮೊದಲು ನಿಯಂತ್ರಣ ತಪ್ಪಿ ಕಂಟೇನರ್ ವಾಹನ ಪಲ್ಟಿಯಾಗಿದೆ. ಆಗ ಹಿಂದೆ ಇದ್ದ ಬಸ್ ಚಾಲಕ, ಅನಾಹುತ ತಪ್ಪಿಸಲು ಬಸ್ ಗೆ ಬ್ರೇಕ್ ಹಾಕಿದ್ದಾರೆ. ಸಡನ್ ಬ್ರೇಕ್ ಹಾಕುತ್ತಿದ್ದಂತೆ ಹಿಂದಿದ್ದ ಲಾರಿ ಡಿಕ್ಕಿ ಹೊಡೆದಿದೆ. ರಾಜಹಂಸ ಬಸ್ಸು ಬೈಕ್ ಗೆ ಗುದ್ದಿದೆ. ಇದನ್ನು ಕಂಡು ಮತ್ತೊಂದು ಸಾರಿಗೆ ಬಸ್ ಪಕ್ಕಕ್ಕೆ ಹೋಗಿದ್ದರಿಂದ ಗ್ಯಾಸ್ ಸಾಗಿಸುತ್ತಿದ್ದ ಲಾರಿಗೆ ಹಾಗೂ ಗೂಡ್ಸ್ ಲಾರಿಗೆ ಡಿಕ್ಕಿ ಹೊಡೆದಿದೆ. ರಾಜಹಂಸ ಬಸ್ ಚಕ್ರದಲ್ಲಿ ಸಿಲುಕಿ ಪ್ರಾಣಾಪಾಯದಿಂದ ಬೈಕ್ ಸವಾರ ಪಾರಾಗಿದ್ದಾನೆ. ಈ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ಸರಿ ಮಾಡಿದ್ದಾರೆ.