ಚಿಕ್ಕಮಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಪಾಕಿಸ್ತಾನ ಜಿಂದಾಬಾದ್ ಅನ್ನುವುದು ರಾಷ್ಟ್ರ ದ್ರೋಹ ಅಲ್ವಾ? ರಾಷ್ಟ್ರ ದ್ರೋಹಿಗೆ ಕರೆದು ಸನ್ಮಾನ ಮಾಡಬೇಕಿತ್ತಾ? ಮೊನ್ನೆ ಪಾಕಿಸ್ತಾನ ಜಿಂದಾಬಾದ್ ಕೂಗಿದವನ ಹತ್ಯೆಯಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತ್ ಮಾತಾ ಕಿ ಜೈ ಎನ್ನುವ ಸುಹಾಸ್ ಶೆಟ್ಟಿ ಹತ್ಯೆಯಾಗಿದೆ. ಪಹಲ್ಗಾಮ್ ಪ್ರಕರಣದಿಂದ ಜನರು ರೊಚ್ಚಿಗೆದ್ದಿದ್ದರು. ಕ್ರಿಕೆಟ್ ಆಟದ ಮೈದಾನಕ್ಕೆ ಬಂದು ಪಾಕಿಸ್ತಾನ ಜಿಂದಾಬಾದ್ ಎಂದಿದ್ದಕ್ಕೆ ಸಹಜವಾದ ಆಕ್ರೋಶದಿಂದ ಹೊಡೆದಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಸುಹಾಸ್ ಶೆಟ್ಟಿ ಹತ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.
ದ್ರೋಹಿಗಳು ಒಳಗೆ ಇದ್ದಾರೆ. ಹೊರಗಿನ ಶತ್ರುಗಳನ್ನು ನಿಯಂತ್ರಿಸುವುದು ಸುಲಭ. ನಮ್ಮ ಸೈನ್ಯಕ್ಕೆ ಆ ಸಾಮರ್ಥ್ಯ ಇದೆ. ಅದು ಅದನ್ನು ಮಾಡುತ್ತದೆ. ಒಳಗಿನ ದ್ರೋಹಿಗಳನ್ನು ರಾಜಕಾರಣ ಹೊರತಾಗಿಟ್ಟು ನಾವು ಬೇರು ಸಮೇತ ಕಿತ್ತಾಕಬೇಕು. ಬೇರು ಸಮೇತ ಕಿತ್ತಾಕದೆ ಇದ್ದರೆ ಮತ್ತಷ್ಟು ಹತ್ಯೆಯಾಗುತ್ತವೆ. ಇವರೆಲ್ಲ ದ್ರೋಹಿಗಳಿದ್ದಾರೆ. ಇವರನ್ನ ಮಟ್ಟ ಹಾಕಬೇಕು. ಇವರೆಲ್ಲ ಮತಾಂಧತೆಯ ಹುಚ್ಚುತನ ಹಿಡಿಸಿಕೊಂಡಿರುವ ರಾಷ್ಟ್ರ ದ್ರೋಹಿಗಳಿದ್ದಾರೆ. ಇವರನ್ನು ಸಹಿಸುವುದು, ಕ್ಷಮಿಸುವುದು ಎರಡನ್ನೂ ಮಾಡಬಾರದು. SDPI ಅಂತಹ ಸಂಘಟನೆಗಳು ಇಂತಹ ದ್ರೋಹಿಗಳನ್ನು ಸಂಘಟಿಸಿ ಮತಾಂಧತೆಯ ಹುಚ್ಚನ್ನು ಹಿಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರವು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇವರು ವಿಧಾನಸೌಧದಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುತ್ತಾರೆ. ಬೆಳಗಾವಿಯಲ್ಲಿ ವಿಧಾನ ಸಭಾ ಚುನಾವಣೆಯ ಫಲಿತಾಂಶ ಬಂದಾಗ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಇವರನ್ನ ವೋಟ್ ಬ್ಯಾಂಕ್ ರೀತಿ ನೋಡಬೇಕಾ? ಅಥವಾ ದ್ರೋಹಿಗಳಂತೆ ನೋಡಬೇಕಾ? ಇವರನ್ನು ಬೆಳೆಸುತ್ತಿರುವವರನ್ನು ಬೇರು ಸಮೇತ ಕಿತ್ತು ಹಾಕಬೇಕು. ಇಲ್ಲವಾದರೆ ದೇಶ ಉಳಿಯಲು ಸಾಧ್ಯವಿಲ್ಲ. ದೇಶದ್ರೋಹಿಗಳು ರಾಷ್ಟ್ರ ಭಕ್ತರನ್ನು ಹೊಂಚು ಹಾಕಿ ಹತ್ಯೆ ಮಾಡುವ ಸಂಚು ಮಾಡಿದ್ದಾರೆ. SDPI, PFI ಕೇಸ್ ಗಳನ್ನ ವಾಪಸ್ ಪಡೆದಿರುವುದೇ ಅವರಿಗೆ ಕ್ರೈಮ್ ಮಾಡಲು ದಾರಿ ಮಾಡಿಕೊಟ್ಟಂತಾಗಿದೆ. ಹೀಗಾಗಿ ಸಿಎಂ ಈ ವಿಷಯವನ್ನು ಮತ್ತೊಂದು ಸಲ ಪರಿಶೀಲೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.