ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಆರಂಭವಾಗಿದೆಯೇ? ಪಹಲ್ಗಾಮ್ ದಾಳಿಗೆ ಭಾರತ ಮಾಡಿದ ಪ್ರತಿದಾಳಿ ಈಗ ಉಭಯ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಜಮ್ಮು, ಪಂಜಾಬಿನ ಹಲವು ನಗರಗಳು ಸಂಪೂರ್ಣವಾಗಿ ಬ್ಲಾಕ್ ಔಟ್ ಆಗಿವೆ. ಡ್ರೋನ್ ದಾಳಿ, ಪ್ರತಿದಾಳಿಗಳು ನಡೆಯುತ್ತಿವೆ. ಹಾಗಾಗಿ, ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧ ಆರಂಭವಾಗಿದೆ ಎಂಬ ಲಕ್ಷಣಗಳು ಗೋಚರಿಸುತ್ತಿವೆ. ಅದರಲ್ಲೂ, ಲಾಹೋರ್ ಮೇಲೆ ಭಾರತವು ಕ್ಷಿಪಣಿ ದಾಳಿ ನಡೆಸುತ್ತಿದೆ. ಕರಾಚಿ ಬಂದರನ್ನು ಧ್ವಂಸಗೊಳಿಸಲಾಗಿದೆ. ಹಾಗಾಗಿ, ಭಾರತ-ಪಾಕಿಸ್ತಾನ ಮಧ್ಯೆ ಯುದ್ಧ ಶುರುವಾಗಿದೆ ಎಂದೇ ಹೇಳಲಾಗುತ್ತಿದೆ.
Karachi Port is fully destroyed 😨
— Richard Kettleborough (@RichKettle07) May 8, 2025
Game over for Pakistan 🇵🇰 pic.twitter.com/6yvn17A2gD
ಯುದ್ಧ ಆರಂಭ ಎನ್ನಲು ಈ ಬೆಳವಣಿಗೆಗಳು ಸಾಕು
- ಭಾರತದ ಆಪರೇಷನ್ ಸಿಂದೂರಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ದಾಳಿ ನಡೆಸುತ್ತಿದೆ. ಗಡಿಗಳಲ್ಲಿ ಸತತ ಗುಂಡಿನ ದಾಳಿ, ಡ್ರೋನ್ ದಾಳಿ ಮಾಡುತ್ತಿದೆ.
- ಇದುವರೆಗೆ ಪಾಕಿಸ್ತಾನದಿಂದ ಹಾರಿ ಬಂದ ಹಲವಾರು ಡ್ರೋನ್ ಗಳನ್ನು ಭಾರತ ಹೊಡೆದುರುಳಿಸಿದೆ.
- ಜಮ್ಮು, ಪಂಜಾಬ್, ರಾಜಸ್ಥಾನ ಸೇರಿ ಹಲವೆಡೆ ಪಾಕ್ ಡ್ರೋನ್ ದಾಳಿ ನಡೆಸುತ್ತಿದೆ. ಭಾರತ ಕೂಡ ತಿರುಗೇಟು ನೀಡುತ್ತಿದೆ.
- ಪಾಕಿಸ್ತಾನದ ವಿರುದ್ಧ ಒಂದು ಹೆಜ್ಜೆ ಮುಂದೆ ಹೋಗಿರುವ ಭಾರತವು, ಲಾಹೋರ್, ರಾವಲ್ಪಿಂಡಿ ಸೇರಿ ಹಲವೆಡೆ ದಾಳಿ ನಡೆಸುತ್ತಿದೆ.
🚨BIG :
— Amitabh Chaudhary (@MithilaWaala) May 8, 2025
India’s Sudarshan Chakra S-400 in action in Jalandhar 🔥#IndiaPakistanWar #Jalandhar #S400 pic.twitter.com/2wc7yKksBD
- ಪಾಕಿಸ್ತಾನದ ದಾಳಿಯನ್ನು ನಿಗ್ರಹಿಸಲು ಭಾರತವು ರಷ್ಯಾ ನಿರ್ಮಿತ, ಸುದರ್ಶನ ಚಕ್ರ ಎಂದೇ ಖ್ಯಾತಿಯಾದ ಎಸ್-400 ಸಿಸ್ಟಮ್ ಬಳಸುತ್ತಿದೆ.
- ಪಾಕಿಸ್ತಾನದ ಸತತ ದಾಳಿಯಿಂದಾಗಿ ಧರ್ಮಶಾಲಾದಲ್ಲಿ ಆರಂಭವಾಗಿದ್ದ ಪಂಜಾಬ್-ಡೆಲ್ಲಿ ಪಂದ್ಯವನ್ನು ಭದ್ರತಾ ಕಾರಣದಿಂದಾಗಿ ರದ್ದು ಮಾಡಲಾಗಿದೆ.
- ಉಗ್ರರ ಮೇಲೆ ನಡೆದ ದಾಳಿಯನ್ನು ಭಾರತವು ಪಾಕಿಸ್ತಾನದ ಸೇನೆ ಮೇಲೆ ತಿರುಗಿಸಿದ್ದು, ಪಾಕ್ ಏರ್ ಡಿಫೆನ್ಸ್ ಸಿಸ್ಟಮ್ ಅನ್ನೇ ಧ್ವಂಸಗೊಳಿಸಿದೆ.
- ಪಾಕಿಸ್ತಾನದ ಎಫ್-16, ಎಫ್-17 ಯುದ್ಧವಿಮಾನಗಳನ್ನು, ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿದೆ.
- ಜಮ್ಮು, ಶ್ರೀನಗರ, ಚಂಡೀಗಢ, ಅಮೃತಸರ ಏರ್ ಪೋರ್ಟ್ ಸ್ಥಗಿತಗೊಂಡಿವೆ. ನೂರಾರು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
- ಪಾಕ್ ದಾಳಿಯ ಹಿನ್ನೆಲೆಯಲ್ಲಿ ಪಂಜಾಬಿನ ಲುಧಿಯಾನದಲ್ಲಿ ಜನರಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.
- ಪಾಕಿಸ್ತಾನದಿಂದ ಜಮ್ಮು, ಉಧಾಮ್ ಪುರ, ಪಠಾಣ್ ಕೋಟ್, ರಾಜೌರಿ, ಸಾಂಬಾ ಸೇರಿ ಹಲವು ನಗರಗಳ ಮೇಲೆ ಡ್ರೋನ್ ದಾಳಿಗೆ ಯತ್ನ. ಡ್ರೋನ್ ಗಳನ್ನು ಭಾರತ ಹೊಡೆದುರುಳಿಸಿದೆ.
- ದೇಶದ ಪ್ಯಾರಾ ಮಿಲಿಟರಿ ಪಡೆಗಳ ರಜೆಗಳನ್ನು ರದ್ದುಗೊಳಿಸಲಾಗಿದೆ.
- ಅಜಿತ್ ದೋವಲ್ ಸತತವಾಗಿ ಸಭೆ ನಡೆಸುತ್ತಿದ್ದಾರೆ. ಪ್ಯಾರಾ ಮಿಲಿಟರಿ ಜತೆ ಅಮಿತ್ ಶಾ ಮಾತನಾಡಿದ್ದಾರೆ.
ಇಂತಹ ನೂರಾರು ಬೆಳವಣಿಗೆಗಳು ಎರಡೂ ದೇಶಗಳ ನಡುವಿನ ಸಂಘರ್ಷದ ತೀವ್ರತೆಯನ್ನು ತಿಳಿಸುತ್ತಿವೆ. ಹಾಗಾಗಿ, ಭಾರತ ಹಾಗೂ ಪಾಕಿಸ್ತಾನದ ನಡುವೆ ಅಘೋಷಿತ ಯುದ್ಧ ಶುರುವಾಗಿದೆ ಎಂದೇ ಹೇಳಲಾಗುತ್ತಿದೆ. ಆದಾಗ್ಯೂ, ಭಾರತವು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಇದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.