ಕೊಪ್ಪಳ: ಪಾಪಿ ಮೊಮ್ಮಗನೊಬ್ಬ ಕೇವಲ 100 ರೂ. ಗೆ ಸ್ವಂತ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಪ್ಪಳದ(Kopala) ಕನಕಗಿರಿ(Kanakagiri) ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕನಕಮ್ಮ ನಾಗಪ್ಪ ಬೊಕ್ಕಸದ(82) ಕೊಲೆಯಾಗಿರುವ ದುರ್ದೈವಿ. ಮೊಮ್ಮಗ ಚೇತನ್ ಕುಮಾರ್ ಕೊಲೆ ಮಾಡಿರುವ ಆರೋಪಿ ಮೊಮ್ಮಗ ಎನ್ನಲಾಗಿದೆ.
ಆರೋಪಿ ಪ್ರತಿ ದಿನವೂ ಕುಟುಂಬಸ್ಥರಲ್ಲಿ ಹಣ ಬೇಕೆಂದು ಪೀಡಿಸುತ್ತಿದ್ದ ಎನ್ನಲಾಗಿದೆ. ಹೀಗೆ ಅಜ್ಜಿಯ ಬಳಿ ಹಣ ಕೇಳಿ ಕೊಡದಿದ್ದಾಗ ಅಜ್ಜಿ ಕನಕಮ್ಮನ ತಲೆಯ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿದ್ದಾನೆ. ಪರಿಣಾಮ ತಲೆಯ ಭಾಗಕ್ಕೆ ಪೆಟ್ಟಾಗಿದೆ. ತೀವ್ರ ರಕ್ತಸ್ರಾವದಿಂದ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.