ನವದೆಹಲಿ: ಶತೃ ರಾಷ್ಟಕ್ಕೆ ಬಲವಾದ ಏಟು ಕೊಡಿ. ವಿರೋಧಿಯ ಒಂದು ಏಟಿಗೆ, ಮೂರು ಏಟು ಕೊಡಿ. ಉತ್ತರ ದಿಟ್ಟವಾಗಿರಲಿ ಎಂದು ಸಶಸ್ತ್ರ ಪಡೆಗಳಿಗೆ ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ ನೀಡಿದ್ದಾರೆ.
ಭಯೋತ್ಪಾದನೆ ವಿಚಾರದಲ್ಲಿ ಭಾರತ ಹೊಸ ನೀತಿ ಅನುಸರಿಸಿದ್ದು, ಗುಂಡಿನ ಮೂಲಕ ದಾಳಿ ಮಾಡಿದರೆ ಮರುಕ್ಷಣವೇ ಸಶಸ್ತ್ರ ಪಡೆಗಳು ಗುಂಡೇಟಿನಿಂದಲೇ ಸೂಕ್ತ ಪ್ರತಿಕ್ರಿಯೆ ನೀಡಬೇಕು. ಭಾರತದ ಪ್ರತ್ಯುತ್ತರವು ಎದುರಾಳಿಯ ಏಟಿಗಿಂತ ಮೂರು ಪಟ್ಟು ಬಲವಾಗಿರಬೇಕು ಎಂದು ಸೂಚಿಸಿದ್ದಾರೆ.
‘ಆಪರೇಷನ್ ಸಿಂಧೂರ’ ಇನ್ನೂ ಚಾಲ್ತಿಯಲ್ಲಿದೆ. ನಮ್ಮ ಮುಂದಿನ ಕಾರ್ಯಾಚರಣೆ ಕುರಿತು ಸೂಕ್ತ ಸಮಯದಲ್ಲಿವಿವರಣೆ ನೀಡಲಾಗುವುದು,” ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಾಯುಪಡೆ ಪೋಸ್ಟ್ ಮಾಡಿದೆ.