ಹುಬ್ಬಳ್ಳಿ: ನಗರದಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿ ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಹೀಗಾಗಿ ಎನ್ ಕೌಂಟರ್ ಮಾಡಲಾಗಿತ್ತು. ಆದರೆ, ಆತನ ಶವ ಪತ್ತೆಗೆ ಮಾತ್ರ ಯಾರೂ ಬಂದಿರಲಿಲ್ಲ. ಹೀಗಾಗಿ ಅನಾಥವಾಗಿದ್ದ ಶವಕ್ಕೆ ಪೊಲೀಸರು ಮುಕ್ತಿ ಕಾಣಿಸಿದ್ದಾರೆ.
ಹಂತಕ ರಿತೇಶಕುಮಾರ್ ನ ಶವವನ್ನು ಅಂತ್ಯಸಂಸ್ಕಾರ ಮಾಡಲಾಗಿದೆ. ಹುಬ್ಬಳ್ಳಿಯ ಬಿಡ್ನಾಳದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ತಹಸೀಲ್ದಾರ್, ಸಿಐಡಿ ಅಧಿಕಾರಿಗಳು, ಮಹಾನಗರ ಪಾಲಿಕೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನ ಪೂರೈಸಲಾಗಿದೆ.
ಏ. 13ರಂದು ಬಾಲಕಿಯ ಮೇಲೆ ಪೈಶಾಚಿಕ ಹತ್ಯೆ ಎಸಗಿ ರಿತೇಶಕುಮಾರ್ ಹತ್ಯೆ ಮಾಡಿದ್ದ. ಅಲ್ಲದೇ, ಆತ ಅಂದೇ ಎನ್ ಕೌಂಟರ್ ಆಗಿದ್ದ. ಹಂತಕನ ಕುಟುಂಬಸ್ಥರ ಪತ್ತೆಗಾಗಿ ಕಳೆದ ಇಪ್ಪತ್ತು ದಿನಗಳಿಂದ ಪೊಲೀಸರು ಹುಡುಕಾಟ ನಡೆಸಿದ್ದರು. ಕುಟುಂಬಸ್ಥರು ಹಾಗೂ ಸಂಬಂಧಿಕರಿಗಾಗಿ ಬಿಹಾರ, ಮಹಾರಾಷ್ಟ್ರದ ಗಲ್ಲಿ ಗಲ್ಲಿಗಳಲ್ಲಿ ಪೊಲೀಸರು ಸುತ್ತಿದ್ದರು. ಕುಟುಂಬಸ್ಥರು ಸಿಗದ ಕಾರಣ ರಿತೇಶಕುಮಾರನ ಶವವನ್ನು ಕಿಮ್ಸ್ ಸಿಬ್ಬಂದಿ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದರು.