ಹೆಂಡತಿಗೆ ಕೆಲಸ ಬಿಡುವಂತೆ ಹೇಳಿ ಒತ್ತಡ ಹಾಕುವುದು ಕ್ರೌರ್ಯವಾಗುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
ಕೆಲಸ ಬಿಡಬೇಕು ಎಂಬ ಪತಿಯ ವರ್ತನೆಯಿಂದ ಬೇಸತ್ತ ಪತ್ನಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಹಾಗೂ ನ್ಯಾಯಮೂರ್ತಿ ಸುಶ್ರೂರ್ ಧರ್ಮಾಧಿಕಾರಿ ಅವರಿದ್ದ ವಿಭಾಗೀಯ ಪೀಠ, ” ಪತಿಯಾಗಲಿ ಅಥವಾ ಪತ್ನಿಯಾಗಲಿ ತಮ್ಮ ವೈಯಕ್ತಿಕ ಆದ್ಯತೆಗೆ ಅನುಗುಣವಾಗಿ ಕೆಲಸ ಬಿಡುವಂತೆ ಸಂಗಾತಿಗೆ ಒತ್ತಾಯಿಸುವಂತಿಲ್ಲ. ಆ ಹಕ್ಕು ಇಲ್ಲ ಎಂದು ಹೇಳಿದೆ.
ಒಟ್ಟಿಗೆ ವಾಸಿಸುವ ನಿರ್ಧಾರ ಸಂಗಾತಿಗಳ ಪರಸ್ಪರ ಆಯ್ಕೆಯ ಅಭಿಪ್ರಾಯ. ಆದರೆ, ತನ್ನ ಆಯ್ಕೆಯಂತೆ ಇರಬೇಕು. ಉದ್ಯೋಗ ಬಿಡಬೇಕು ಎಂದು ಒತ್ತಾಯಿಸುವುದು ಮಾತ್ರ ಕ್ರೌರ್ಯಕ್ಕೆ ಸಮ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಹೀಗಾಗಿ ಮಹಿಳೆಗೆ ಕೆಲಸ ಮಾಡುವಲ್ಲಿ ಸ್ವಾತಂತ್ರ್ಯ ನೀಡಬೇಕೆಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.