ಕಲಬುರಗಿ: ಹಠಾತ್ ಹೃದಯಾಘಾತದಿಂದ ಅಬಕಾರಿ ಇಲಾಖೆ ಪಿಎಸ್ಐ ನಿಧನ ಹೊಂದಿರುವ ಘಟನೆ ಕಲಬುರಗಿ ನಗರದ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ನಡೆದಿದೆ.
ಮಂಜುನಾಥ (46) ಹೃದಯಾಘಾತದಿಂದ ಮೃತ ಪಟ್ಟ ವ್ಯಕ್ತಿ.
ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ ಅವರು ತರಬೇತಿ ನಿಮಿತ್ತ ಕಲಬುರಗಿಗೆ ಹೋಗಿದ್ದ ವೇಳೆ ಅವರಿಗೆ ಹಠಾತ್ ಹೃದಯಾಘಾತಕ್ಕೊಳಗಾಗಿದ್ದಾರೆ.
ಬಳಿಕ ಜಯದೇವ ಆಸ್ಪತ್ರೆಗೆ ಅವರನ್ನು ರವಾನಿಸಿದಾಗ್ಯೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.