ಬೆಂಗಳೂರು ಗ್ರಾಮಾಂತರ : ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತೆನೆಯೂರು ಗ್ರಾಮದಲ್ಲಿ ಶಿಕ್ಷಕನ ಮೇಲೆ ವರದಕ್ಷಣೆ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ.
ನೊಂದ ಮಹಿಳೆಯ ದೂರಿನಂತೆ, ಪ್ರೀತಿಸಿ ಮದುವೆಯಾಗಿದ್ದರೂ ದಿನನಿತ್ಯ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನ ಬಂದಂತೆ ಬಾಸುಂಡೆ ಬರುವಂತೆ ವಿಜಯ್ ಕುಮಾರ್ ಹಲ್ಲೆ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಗಂಡ ಮತ್ತು ಅತ್ತೆ ಸಹ ಸೇರಿ ಪ್ರತಿದಿನ ಕೆಟ್ಟ ಪದಗಳಿಂದ ನಿಂದನೆ ಹಾಗೂ ಹಲ್ಲೆ ನಡೆಸುತ್ತಾರೆ. ವರದಕ್ಷಣೆ ವಿಚಾರಕ್ಕೆ ಪ್ರತಿದಿನ ಕಿರುಕುಳಕೊಡುತ್ತಾರೆ ಎಂದು ಮನನೊಂದ ಮಹಿಳೆ ಹೇಳಿದ್ದಾರೆ.
ಹಲ್ಲೆಗೊಳಗಾದ ಮಹಿಳೆಯು ಸೂಲಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಾನೂನಿನ ಪ್ರಕಾರ ಆರೋಪಿಗಳನ್ನು ಬಂಧಿಸಿ ನ್ಯಾಯ ನೀಡಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಪ್ರೀತಿಸಿದ ಯುವತಿಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯ | ಮನನೊಂದು ಬಾಡಿ ಬಿಲ್ಡರ್ ಆತ್ಮಹತ್ಯೆ


















