ಓರ್ವ ಜನಪ್ರತಿನಿಧಿಯಾಗಿ ಆಹ್ವಾನ ನೀಡಿದಾಗ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರಬಹುದು. ಹಾಗಂತಾ ಯಾರೋ ಒಬ್ರು ಹೇಳಿಕೆ ಕೊಟ್ಟ ಕೂಡಲೇ ಆರೋಪಿ ಆನ್ನೋದು ತಪ್ಪು. ಡಿಕೆ ಸುರೇಶ್ ರನ್ನು ಇಡಿ ವಿಚಾರಣೆಗೆ ಕರೆದಿದೆ. ಅವರೂ ಕೂಡಾ ಅಧಿಕಾರಿಗಳ ಎಲ್ಲ ಪ್ರಶ್ನೆಗಳ ಉತ್ತರ ನೀಡುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಂಚನೆ ಪ್ರಕರಣದ ಆರೋಪಿಯಾಗಿರುವ ಐಶ್ವರ್ಯಾಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಇಡಿ ವಿಚಾರಣೆಗೆ ಹಾಜರಾಗಿದ್ದು, ಈ ವಿಷಯವಾಗಿ ಡಿಕೆಶಿ ಮಾತನಾಡಿದ್ದಾರೆ. ವಿನಾಕಾರಣ ಈ ವಿಚಾರವನ್ನು ದೊಡ್ಡದು ಮಾಡಬೇಡಿ ಅಂತಾ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ತಮ್ಮ ಸಹೋದರ ಇಡಿ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡುತ್ತಾರೆ. ಈ ಹಿಂದೆ ತಮ್ಮ ವಿರುದ್ಧವೂ ಆರೋಪ ಬಂದಿತ್ತು ಕಡೆಗೆ ಏನಾಯ್ತು ಎಂದು ಪ್ರಶ್ನಿಸಿದ್ದಾರೆ.