ದಾವಣಗೆರೆ : ಅಕ್ರಮವಾಗಿ ಪಡಿತರ ರಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ದಾವಣಗೆರೆ ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಇರ್ಷಾದ್ ಅಲಿ ಎಂದು ಗುರುತಿಸಲಾಗಿದೆ. ನಗರದ ಪಿಜೆ ಬಡಾವಣೆಯ ಮೋತಿ ವೀರಪ್ಪ ಕಾಲೇಜು ಬಳಿ ಗೂಡ್ಸ್ ವಾಹನದಲ್ಲಿ ಆರೋಪಿ ಅಕ್ರಮವಾಗಿ ಪಡಿತರ ರಾಗಿ ಸಾಗಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ವಾಹನದಲ್ಲಿದ್ದ ರಾಗಿ ಮೂಟೆಗಳ ಬಿಲ್ ಕೊಡುವಂತೆ ಆರೋಪಿ ಬಳಿ ಕೇಳಿದ್ದಾರೆ. ಆಗ ಆತ ಮಲೇಬೆನ್ನೂರು ಗ್ರಾಮದ ಸುತ್ತಮುತ್ತ ಗ್ರಾಮಗಳಲ್ಲಿ ಜನಗಳಿಂದ ಕಡಿಮೆ ಬೆಲೆಗೆ ಪಡಿತರ ರಾಗಿಯನ್ನು ಖರೀದಿಸಿ ಎಪಿಎಂಸಿಯಲ್ಲಿ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದಾನೆ.
ಬಂಧಿತನಿಂದ 1.13 ಲಕ್ಷ ಮೌಲ್ಯದ 76 ಮೂಟೆಯಲ್ಲಿದ್ದ 3,770 ಕೆಜಿ ಪಡಿತರ ರಾಗಿ ಹಾಗೂ ಗೂಡ್ಸ್ ವಾಹನ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : “ಅವರಿಗೆ ಬ್ಯಾಟ್ ಹಿಡಿಯಲೂ ಬರುವುದಿಲ್ಲ”: ಜಯ್ ಶಾ ಐಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ರಾಹುಲ್ ಗಾಂಧಿ ವ್ಯಂಗ್ಯ



















