ದೇಶದಲ್ಲಿ ಮತ್ತೆ ಕೋವಿಡ್ ರಣಾರ್ಭಟ ಆರಂಭವಾಗಿದೆ. ದಿನದಿಂದ ದಿನಕ್ಕೆ ಸೋಂಕಿನ ವ್ಯಾಪ್ತಿ ಹೆಚ್ಚುತ್ತಲೇ ಹೋಗುತ್ತಿದೆ.
ಆರಂಭದಲ್ಲಿ ಕೇವಲ 4 ರಿಂದ 5 ರಾಜ್ಯಗಳಲ್ಲಿ ಪ್ರತ್ಯಕ್ಷವಾಗಿದ್ದ ಮಹಾಮಾರಿ ಇದೀಗ ದೇಶದ 15ಕ್ಕೂ ಹೆಚ್ಚು ರಾಜ್ಯಗಳನ್ನು ವ್ಯಾಪಿಸುವ ಮೂಲಕ ಆತಂಕಕ್ಕೆ ಕಾರಣವಾಗುತ್ತಿದೆ. ಇವತ್ತಿನವರೆಗೂ 4866 ಜನರಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, ಇವತ್ತು ಒಂದೇ ದಿನ 564 ಹೊಸ ಕೇಸ್ ಗಳು ದಾಖಲಾಗಿವೆ.
ಈ ಪೈಕಿ 437 ಪ್ರಕರಣಗಳು ಕೇವಲ ಕೇರಳ ಒಂದರಲ್ಲೇ ಪತ್ತೆಯಾಗಿರೋದು ಕರ್ನಾಟಕಕ್ಕೂ ಆತಂಕಕಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲೇ ಕೇರಳ ಸರ್ಕಾರ ರೋಗ ಲಕ್ಷಣಗಳಿದ್ದವರಿಗೆ ಕಡ್ಡಾಯ ಕೋವಿಡ್ ಟೆಸ್ಟ್ ಗೆ ಸೂಚಿಸಿದೆ. ಇನ್ನು ಕರ್ನಾಟಕದಲ್ಲಿ 112, ಪಶ್ಚಿಮ ಬಂಗಾಳದಲ್ಲಿ 106, ದೆಹಲಿಯಲ್ಲಿ 105 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ನಡುವೆ, ಕೇರಳದಲ್ಲಿ ಆರೋಗ್ಯ ಇಲಾಖೆ ತುರ್ತು ಪರಿಸ್ಥಿತಿ ಎದುರಿಸೋ ನಿಟ್ಟಿನಲ್ಲಿ ಅಣಕು ತಾಲೀಮನ್ನು ನಡೆಸಲು ಸೂಚಿಸಲಾಗಿದೆ.