ಬೆಂಗಳೂರು : ಬಡವರಿಗೆ ತಂದ ಯೋಜನೆಯನ್ನು ಶ್ರೀಮಂತರು ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನಲೆ ಗ್ಯಾರಂಟಿ ಯೋಜನೆಯನ್ನು ಮತ್ತೊಮ್ಮೆ ಪರಿಷ್ಕರಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಈಗಾಗಲೇ ಅನ್ನ ಭಾಗ್ಯ ಯೋಜನೆಯನ್ನು ಮರು ಪರೀಕ್ಷರಣೆ ಮಾಡಲಾಗಿತ್ತು. ಈಗ ಶಕ್ತಿ ಯೋಜನೆ ಭಾಗ್ಯ ಮರು ಪರೀಕ್ಷರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಎಲ್ಲಾ ಮಹಿಳೆಯರಿಗೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತ ಪಯಾಣದ ಯೋಜನೆ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿತ್ತು. ಆದರೆ ಈ ಯೋಜನೆಯನ್ನು ಬಂಡವಾಳ ಮಾಡಿಕೊಂಡ ಶ್ರೀಮಂತ ವರ್ಗದ ಮಹಿಳೆಯರು ಕೂಡ ಕೆಎಸ್ಆರ್ಟಿಸಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ವಾರ್ಷಿಕ ಲಕ್ಷಾಂತರ ರೂಪಾಯಿ ಅದಾಯ ಇದವರು ಉಚಿತವಾಗಿ ಪಯಾಣ ಮಾಡುತ್ತಿದ್ದು, ಇದರಿಂದ ಸಾರಿಗೆ ಸಂಸ್ಥೆಗೆ ಕೋಟ್ಯಂತರ ಹಣ ನಷ್ಟವಾಗುತ್ತಿದೆ. ಈ ನಷ್ಟ ಸರಿದೂಗಿಸಲು ಶಕ್ತಿ ಯೋಜನೆ ಮರು ಪರಿಷ್ಕರಣೆ ಮಾಡುವಂತೆ ಸಿಎಂಗೆ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಚಿನ್ನದ ಬೆಲೆ ಗಗನಕ್ಕೆ: ಅಷ್ಟಕ್ಕೂ ಬೆಲೆಯನ್ನು ನಿರ್ಧರಿಸುವುದು ಮೋದಿ ಸರ್ಕಾರವಾ? ಇಲ್ಲಿದೆ ಮಾಹಿತಿ



















