ಅಗ್ನಿ ಅವಘಡದಲ್ಲಿ ಗಾಯಗೊಂಡಿರುವ ಪವನ್ ಕಲ್ಯಾಣ್ ಪುತ್ರ ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಕೈ ಹಾಗೂ ಕಾಲಿಗೆ ಮಾರ್ಕ್ ಶಂಕರ್ ಗೆ ಗಾಯಗಳಾಗಿದ್ದು, ಬೆಂಕಿಯ ಹೊಗೆಯಿಂಗಾಗಿ ಉಸಿರಾಟದ ಸಮಸ್ಯೆ ಅನುಭಿಸುತ್ತಿದ್ದಾರೆ. ಈಗಾಗಲೇ ಮಗನ ಆರೋಗ್ಯ ವಿಚಾರಿಸಲು ಸಿಂಗಾಪುರಕ್ಕೆ ಪವನ್ ಕಲ್ಯಾಣ್ ತೆರಳಿದ್ದಾರೆ.
ಈ ನಡುವೆ, ತಮ್ಮನ ಮಗನಿಗಾದ ಅಪಘಾತದ ಮಾಹಿತಿ ಸಿಗುತ್ತಿದ್ದಂತೆ ಸಹೋದರ ಕೂಡ ಸಿಂಗಾಪುರಕ್ಕೆ ಹಾರಿದ್ದಾರೆ. ಪವನ್ ಪುತ್ರನ ಆರೋಗ್ಯ ವಿಚಾರಿಸಲು ಅಣ್ಣ ಚಿರಂಜೀವಿ ಪತ್ನಿ ಸುರೇಖಾ ಸಹಿತ ಸಿಂಗಾಪುರಕ್ಕೆ ಹೋಗಿದ್ದಾರೆ. ನಿನ್ನೆ ರಾತ್ರಿಯೇ ಹೈದ್ರಾಬಾದ್ ನಿಂದ ವಿಮಾನ ಏರಿರುವ ಮೆಗಾ ಸ್ಟಾರ್, ಸಹೋದರನ ಪುತ್ರನ ಆರೋಗ್ಯ ವಿಚಾರಿಸಿದ್ದಾರೆ.