ಉಡುಪಿ: ಬಿಗ್ಬಾಸ್ ಖ್ಯಾತಿಯ ಚೈತ್ರ ಕುಂದಾಪುರ ತಂದೆಯ ಹೇಳಿಕೆಗಳಿಗೆ ತಾಯಿ ರೋಹಿಣಿ ಕೌಂಟರ್ ಕೊಟ್ಟಿದ್ದಾರೆ. ನನ್ನ ಪತಿ ಜವಾಬ್ದಾರಿ ಇಲ್ಲದ ವ್ಯಕ್ತಿ. ಮನೆಯ ಯಾವ ಕಷ್ಟಕ್ಕೂ ಸ್ಪಂದಿಸಿದವರಲ್ಲ. ದೊಡ್ಡ ಮಗಳು ಹೇಳಿಕೊಟ್ಟಿದ್ದನ್ನು ಅವರು ಹೇಳುತ್ತಿದ್ದಾರೆ. ಯಾವ ಸಂದರ್ಭದಲ್ಲೂ ಕೂಡ ಮನೆಯ ಜವಾಬ್ದಾರಿಯನ್ನು ಈ ವ್ಯಕ್ತಿ ತೆಗೆದುಕೊಂಡಿಲ್ಲ.
ಕೆಲಸ ಮಾಡುತ್ತೇನೆ ಎಂದು ಅಂತ ಹೋಗುತ್ತಾರೆ ದುಡಿದು ಬಂದ ಹಣವನ್ನು ದೊಡ್ಡ ಮಗಳಿಗೆ ಕೊಡುತ್ತಾರೆ. ನನ್ನ ದೊಡ್ಡ ಮಗಳು ಆಸ್ತಿಗೋಸ್ಕರ ತಂದೆಗೆ ಈ ರೀತಿ ಮಾತನಾಡಲು ಹೇಳಿಕೊಟ್ಟಿದ್ದಾಳೆ.
ನನ್ನ ಮಕ್ಕಳನ್ನು ಓದಿಸುವಾಗಲು ಕೂಡ ಈತ ಸಹಾಯ ಮಾಡಿಲ್ಲ. ಓದಿದ್ದು ಸಾಕು ಕೆಲಸಕ್ಕೆ ಹಾಕು ಎನ್ನುತ್ತಿದ್ದರು. ಮೂರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಅವರು ಮಾಡಿರುವ ಒಂದೇ ಒಂದು ಉಪಕಾರ ಅಂದರೆ, ಆ ಕಾಲದಲ್ಲಿ ಒಂದುವರೆ ಎರಡು ಲಕ್ಷ ರೂಪಾಯಿಯಲ್ಲಿ ಮನೆ ಕಟ್ಟಿದರು.
ಆದ್ರೆ ಅವರು ಕಟ್ಟಿದ್ದ ಮನೆ ಕೂಡ ಇಲ್ಲಿ ಬಿದ್ದು ಹೋಗಿದೆ. ನನ್ನ ಸ್ವಬುದ್ದಿಯಿಂದ ಮಾತನಾಡಲು ಬರುವುದಿಲ್ಲ ಅವರು ಒಂಥರಾ ಮಾನಸಿಕ ವ್ಯಕ್ತಿ ಯಾರು ಏನು ಹೇಳಿಕೊಡುತ್ತಾರೋ ಅದನ್ನೇ ಹೇಳುತ್ತಾರೆ ಎಂದಿದ್ದಾರೆ.