ಮೇಘಾಲಯದ ಚಿರಾಪುಂಜಿಗೆ ಹನಿಮೂನ್ ಗೆ ತೆರಳಿ ಪತ್ನಿಯೇ ಪತಿಯನ್ನು ಮುಗಿಸಿರುವ ಘಟನೆಗೆ ಸಂಬಂಧಿಸಿದಂತೆ ಅಪ್ಡೇಟ್ ಸಿಕ್ಕಿದೆ.
ಪ್ರಿಯಕರನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸೋನಂ, ಪತಿ ರಾಜಾ ರಘುವಂಶಿ ಹತ್ಯೆಗೈದಿರುವುದು ಪೊಲೀಸ್ ತನಿಖೆ ವೇಳೆ ಬಟಾ ಬಯಲಾಗಿದೆ.
ಇಂದೋರ್ ದಂಪತಿ ರಾಜಾ ರಘುವಂಶಿ ಹಾಗೂ ಸೋನಂ ಮೇ 25ರಂದು ಚಿರಾಪುಂಜಿಗೆ ಮಧುಚಂದ್ರಕ್ಕೆ ತೆರಳಿದ್ದರು. ಮೊದಲೇ ಪ್ಲ್ಯಾನ್ ಮಾಡಿಕೊಂಡು ಬಂದಿದ್ದ ಸೋನಂ, ಪ್ರಿಯಕರನ ಪ್ರೀತಿ ಉಳಿಸಿಕೊಳ್ಳಲು ಪತಿ ರಘುವಂಶಿಗೆ ಹತ್ಯೆಗೆ ಸ್ಕೆಚ್ ಹಾಕಿದ್ದಳು. ಅದರಂತೆ ಪಕ್ಕಾ ಪ್ಲ್ಯಾನ್ ಮಾಡಿ ಪ್ರಿಯಕರ ರಾಜ ಕುಶ್ವಾಹನನನ್ನು ಕರೆಸಿಕೊಂಡಿದ್ದಾಳೆ. ಬಳಿಕ ರಾಜಾ ಕುಶ್ವಾಹನಿಗೆ ಮತ್ತೆ ಆಕಾಶ್, ವಿಶಾಲ್, ಆನಂದ್ ಎಂಬುವವರು ಜೊತೆಯಾಗಿದ್ದಾರೆ. ಬಳಿಕ ಅಂದುಕೊಂಡಂತೆ ರಾಜ ರಘು ವಂಶಿಯನ್ನ ಕೊಲೆ ಮಾಡಿದ್ದಾರೆ.
ರಘುವಂಶಿ ಮೃತದೇಹ ಪತ್ತೆ ಆಗುತ್ತಲೇ ನಾಪತ್ತೆ ಆಗಿದ್ದ ಸೋನಂಳ ಫೋನ್ ನಂಬರ್ನ್ನು ಪೊಲೀಸರು ಟ್ರ್ಯಾಕ್ ಮಾಡಿದ್ದರು. ಟ್ರ್ಯಾಕಿಂಗ್ ಹಿಸ್ಟರಿಯಲ್ಲಿ ರಾಜ ಕುಶ್ವಾಹಾ ಜೊತೆ ಸೋನಂ ಗಂಟೆಗಟ್ಟಲೆ ಮಾತನಾಡಿರುವುದು ತಿಳಿದು ಬಂದಿದೆ. ಈ ಸುಳಿವು ಆಧರಿಸಿಯೇ ಪೊಲೀಸರು ಸೋನಂಳಿಗೆ ಖೆಡ್ಡಾ ತೋಡಿದ್ದರು.
ಹಂತಕರಿಗೆ ಸೋನಂ ಹಣ ನೀಡಿ ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದ್ದು, ರಾಜ ರಘುವಂಶಿ ಹತ್ಯೆ ಕೇಸ್ನಲ್ಲಿ ಸೋನಂ ಬಾಯ್ ಫ್ರೆಂಡ್ ಕುಶ್ವಾಹಾ ಭಾಗಿಯಾಗಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಮೇಘಾಲಯ ಪೊಲೀಸರು ಕೊಟ್ಟ ಮಾಹಿತಿ ಆಧಾರದ ಮೇಲೆ ಮಧ್ಯಪ್ರದೇಶ ಪೊಲೀಸರು ಮೂವರನ್ನ ಲಾಕ್ ಮಾಡಿದ್ದಾರೆ.
ರಘುವಂಶಿ ಹತ್ಯೆ ಬಳಿಕ ಉತ್ತರಪ್ರದೇಶದ ಗಾಜಿಪುರದ ಡಾಬಾವೊಂದಕ್ಕೆ ಬಂದಿದ್ದ ಸೋನಂ, ಮೊಬೈಲ್ ಪಡೆದು ಕುಟುಂಬಸ್ಥರ ಜೊತೆಗೆ ಮಾತನಾಡಿದ್ದಾರೆ. ನಂತರ ಗಾಜಿಪುರದ ಠಾಣೆಗೆ ಪೊಲೀಸರು ಶರಣಾಗಿದ್ದಾರೆ.