ಬೆಂಗಳೂರು: ಜಾಗತಿಕವಾಗಿ ಇದು ಸಂಘರ್ಷದ ಸಮಯ. ಎಲ್ಲೆಡೆಯೂ ಯುದ್ಧದ ಕಾರ್ಮೋಡ. ಭೂಮಿಯ ಮೇಲೆ ಯುದ್ಧದ ಭಯ ಜನರನ್ನು ತಲ್ಲಣಗೊಳಿಸುತ್ತಿದೆ. ಹೀಗಾಗಿ ಪ್ರತಿಯೊಂದು ರಾಷ್ಟ್ರವು ತುಂಬಾ ಎಚ್ಚರಿಕೆಯ ಹಾದಿ ಇಡುತ್ತಿವೆ. ಯಾವ ಸಂದರ್ಭದಲ್ಲಿ ಯಾವ ದೇಶ ಯುದ್ಧ ಹೂಡಬಹುದು ಎಂಬುವುದೇ ತಿಳಿಯದಂತಹ ಪರಿಸ್ಥಿತಿ ಎದುರಾಗಿದೆ. ರಷ್ಯಾ-ಉಕ್ರೇನ್, ಇಸ್ರೇಲ್-ಇರಾನ್, ಭಾರತ-ಪಾಕಿಸ್ತಾನ್ ಸೇರಿದಂತೆ ಯುದ್ಧದ ಸನ್ನಿವೇಶಗಳು ಸ್ಫೋಟಿಸುತ್ತಲೇ ಇವೆ. ಹೀಗಾಗಿ ಎಲ್ಲ ರಾಷ್ಟ್ರಗಳು ರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ಭಾರತವೂ ಇದಕ್ಕೆ ಹೊರತಲ್ಲ.
ಭಾರತ ಯುದ್ಧ ವಿಮಾನ ಸೇರಿದಂತೆ ಯುದ್ಧ ಪರಿಕರಗಳ ತಯಾರಿಕೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಿದೆ. ಈಗಾಗಲೇ ಭಾರತೀಯ ಯುದ್ಧ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳಲು ಹಲವಾರು ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಹಲವಾರು ರಾಷ್ಟ್ರಗಳು ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. ಭಾರತೀಯ ಯುದ್ಧ ಸಾಮಾಗ್ರಿಗಳಿಗೆ ಜಗತ್ತಿನಲ್ಲಿ ಹೆಚ್ಚು ಬೇಡಿಕೆ ಇದೆ ಎನ್ನುವುದು ಈಗಾಗಲೇ ಜಗಜ್ಜಾಹೀರವಾಗಿದೆ. ಹೀಗಾಗಿ ಭಾರತವು ಯುದ್ಧ ಸಾಮಾಗ್ರಿಗಳ ತಯಾರಿಕೆಗೆ ಹೆಚ್ಚು ಒತ್ತು ನೀಡುತ್ತಿದೆ. ಈಗ ವಿಷಯ ಏನಪ್ಪ ಅಂದ್ರೆ, ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಯುದ್ಧ ವಿಮಾನಗಳ ಎಂಜಿನ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಭಾರತದಲ್ಲಿ ಮುಂದಿನ ಪೀಳಿಗೆಯ ಯುದ್ಧ ವಿಮಾನಗಳಿಗೆ ಶಕ್ತಿ ತುಂಬುವುದಕ್ಕಾಗಿ ಜೆಟ್ ಎಂಜಿನ್ ನ್ನು ಜಂಟಿಯಾಗಿ ಉತ್ಪಾದಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮಾರ್ಚ್ ವೇಳೆಗೆ ಅಮೆರಿಕದ ಜಿಇ ಏರೋಸ್ಪೇಸ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಎಚ್ ಎಎಲ್ ತಿಳಿಸಿದೆ.
ಈ ಕುರಿತು ಎಚ್ ಎಎಲ್ ಅಧ್ಯಕ್ಷ ಡಿ.ಕೆ. ಸುನಿಲ್ ಹೇಳಿದ್ದಾರೆ. ಎಂಜಿನ್ ಗಳ ತಂತ್ರಜ್ಞಾನಗಳ ವರ್ಗಾವಣೆ ಕುರಿತು ಜಿಇ ಏರೋಸ್ಪೇಸ್ ನೊಂದಿಗೆ ಈಗಾಗಲೇ ಮಾತುಕತೆ ಮುಕ್ತಾಯವಾಗಿವೆ. ಎರಡೂ ಬದಿಯವರು ಈಗಾಗಲೇ ವಾಣಿಜ್ಯ ಅಂಶಗಳತ್ತ ಗಮನ ಹರಿಸುತ್ತಿದ್ದಾರೆ. ತೇಜಸ್ ಲೈಟ್ ಕಾಂಬ್ಯಾಕ್ ಏರ್ ಕ್ರಾಫ್ಟ್ ಮಾರ್ಕ್ 2 ಮತ್ತು 5ನೇ ತಲೆಮಾರಿನ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ ಕ್ರಾಫ್ಟ್ ಗಳಲ್ಲಿ ಜಿಇ ಎಂಜಿನ್ ಗಳನ್ನು ಬಳಸಲಾಗುತ್ತಿದೆ.
ದೇಶದಲ್ಲಿ ಎಫ್ -414 ಎಂಜಿನ್ ಗಳನ್ನು ಜಂಟಿಯಾಗಿ ಉತ್ಪಾದಿಸುವ ಬೃಹತ್ ಯೋಜನೆಯನ್ನು ಈಗಾಗಲೇ ಪ್ರಧಾನಿ ಮೋದ್ ಅವರು ಘೋಷಿಸಿದ್ದಾರೆ. ಮುಂದಿನ ಪೀಳಿಕೆಯ ಯುದ್ಧ ವಿಮಾನಗಳಿಗೆ ಶಕ್ತಿ ತುಂಬಲು ಬೆಂಗಳೂರಲ್ಲಿ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ. ಮಾರ್ಚ್ ವೇಳೆಗೆ ಅಮೆರಿಕದ ಜಿಇ ಏರೋಸ್ಪೇಸ್ ಜೊತೆ ಎಚ್ಎಎಲ್ ಒಪ್ಪಂದ ಮಾಡಿಕೊಳ್ಳಲಾಗಿದೆ.
ತೇಜಸ್ ಲೈಟ್ ಕಾಂಬ್ಯಾಟ್ ಏರ್ ಕ್ರಾಫ್ಟ್ ಮಾರ್ಕ್ 2 ಮತ್ತು 5ನೇ ತಲೆಮಾರಿನ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ ಕ್ರಾಫ್ಟ್ ಗಳಲ್ಲಿ ಜಿಇ ಜಿನ್ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಕುರಿತು ಎಚ್ ಎಎಲ್ ಅಧ್ಯಕ್ಷ ಡಿ.ಕೆ. ಸುನಿಲ್ ಮಾಹಿತಿ ನೀಡಿದ್ದಾರೆ.