ತಮಿಳಿನಿಂದ ಕನ್ನಡ ಎಂಬ ಕಮಲ್ ಹಾಸನ್ ಹೇಳಿಕೆಯು ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕನ್ನಡಪರ ಹೋರಾಟಗಾರರು ಕಮಲ್ ಹಾಸನ್ ರನ್ನು ಕರ್ನಾಟಕದಿಂದ ಬ್ಯಾನ್ ಮಾಡಬೇಕು. ಅವರ ಯಾವೊಂದು ಸಿನಿಮಾಗಳನ್ನು ಇಲ್ಲಿ ರಿಲೀಸ್ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಈಗ ಮುಖ್ಯಮಂತ್ರಿ ಚಂದ್ರು ಕೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ.
ಈ ಘಟನೆ ನಡೆಯಬಾರದಿತ್ತು. ಈ ಹೇಳಿಕೆ ಕೊಟ್ಟ ಅವನು ದುರಹಂಕಾರಿ. ಅಯೋಗ್ಯ. ಅವನು ಹೇಳಿದ ಹೇಳಿಕೆ ನಮ್ಮ ನಾಡಿಗೆ ಅವಮಾನ ಆಗಿದೆ. ಆ ಘಟನೆಗೆ ಸಾಕ್ಷಿಯಾಗಿದ್ದ ಶಿವರಾಜ್ ಕುಮಾರ್ ಪಲಾಯನ ಮಾಡಿ ಬಿಟ್ಟರು. ಕಮಲ್ ಹಾಸನ್ ಅವರ ಹೇಳಿಕೆಯನ್ನು ಆ ವೇದಿಕೆಯಲ್ಲೇ ಖಂಡಿಸಬೇಕಿತ್ತು. ನೀವು ನಮ್ಮ ಫ್ಯಾಮಿಲಿಗೆ ತುಂಬಾ ಹತ್ತಿರವಾದ ವ್ಯಕ್ತಿ. ನನಗೆ ನಿಮ್ಮ ಮೇಲೆ ಅಪಾರವಾದ ಗೌರವವಿದೆ. ಆದ್ದರಿಂದ ನಾನು, ನನ್ನ ಕುಟುಂಬ ನಿಮಗೆ ಧನ್ಯವಾದ ಹೇಳುತ್ತೇವೆ. ಆದರೆ, ನಾಡು, ನುಡಿ ವಿಚಾರದಲ್ಲಿ ಹೋರಾಟದ ಪರವಾಗಿ ಇರುತ್ತೇನೆ ಅಂತ ಹೇಳಬೇಕಿತ್ತು. ಬೆಂಗಳೂರಿಗೆ ಬಂದಾಗ ಕೇಳಬಹುದಿತ್ತಲ್ಲ ಅಂತ ಹೇಳ್ತಾರೆ.
ಹಾಗಿದ್ದರೆ, ಕನ್ನಡ ವಿಚಾರಕ್ಕೆ ಬಂದಾಗ ನೀವೇನು ಮಾಡ್ತಿದ್ರಿ? ನನಗೆ ಅರ್ಥವೇ ಆಗಲಿಲ್ಲ ಅನ್ನೋದು ಬೇಜವಾಬ್ದಾರಿತನ ಎಂದಿದ್ದಾರೆ. ನನ್ನ ಪ್ರಕಾರ, ಕಮಲ್ ಹಾಸನ್ ಪರವಾಗಿ ಮಾತನಾಡುತ್ತಾರೋ? ಅವರೆಲ್ಲ ನಾಡದ್ರೋಹಿಗಳು ಎಂದು ಖಾರವಾಗಿ ನುಡಿದಿದ್ದಾರೆ.