ಬೆಂಗಳೂರು: ಭೂಲೋಕದ ವೈಕುಂಠ ಅಂತಲೇ ಕರೆಯಿಸಿಕೊಳ್ಳುವ ತಿರುಪತಿ ಎಲ್ಲರಿಗೂ ಗೊತ್ತಿರುವ ಧಾರ್ಮಿಕ ಕ್ಷೇತ್ರ. ಲಕ್ಷಾಂತರ ಭಕ್ತರನ್ನು ಪ್ರತಿ ದಿನ ತನ್ನ ಸನ್ನಿಧಿಗೆ ಕರೆಯಿಸಿಕೊಳ್ಳುವ ಬಾಲಾಜಿ, ಕೋಟ್ಯಾನು ಕೋಟಿ ಭಕ್ತರ ಪಾಲಿನ ಆರಾಧ್ಯ ದೇವ. ಈಗ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಜ್ಞಾನಿಗಳಿಗೂ ನಿಲುಕದ ಅಚ್ಚರಿಗಳು ಹೊರ ಬರುತ್ತಿವೆ.
ಏಳು ಬೆಟ್ಟಗಳ ಒಡೆಯನ ಕೃಪೆಗೆ ಪಾತ್ರರಾದ್ರೆ ಕುಬೇರ ಯೋಗ ನಿಶ್ಚಿತ ಎಂಬ ನಂಬಿಕೆ ಭಕ್ತರಲ್ಲಿದೆ. ಅಂಬಾನಿಯಿಂದ ಹಿಡಿದು ತೀರಾ ಸಾಮಾನ್ಯನವರೆಗೂ ವೆಂಕಟೇಶ್ವರನ ಆಶೀರ್ವಾದ ಬೇಕೇಬೇಕು. ಶತಮಾನಗಳ ಐತಿಹ್ಯದ ಈ ದೇಗುಲದ ಬಗ್ಗೆ ಅದೆಷ್ಟೇ ಜನರಿಗೆ ತಿಳಿಯದಿರೋ ಆ ದೊಡ್ಡ ಸತ್ಯವನ್ನ ಇವತ್ತು ನಾವು ನಿಮ್ಮ ಮುಂದೆ ತೆರೆದಿಡ್ತಿದ್ದೀವಿ. ಹೌದು, ತಿಮ್ಮಪ್ಪನ ಸನ್ನಿಧಿಯಲ್ಲಿ ಅಂದಿನಿಂದ ಇಂದಿನವರೆಗೂ ನಡೆದು ಬಂದಿರುವ ಕೆಲ ಅಚ್ಚರಿಗಳು ಇಂದಿನ ವಿಜ್ಞಾನ ಲೋಕದ ಊಹೆಗೂ ನಿಲುಕದ್ದಾಗಿದೆ.

ಪ್ರತಿ ವರ್ಷವೂ ವೃದ್ಧಿಸುತ್ತಿದೆ ತಿಮ್ಮಪ್ಪನ ಕೇಶ!
ತಿಮ್ಮಪ್ಪನ ದರ್ಶನಕ್ಕೆ ಹೋದವರು ಹರಕೆ ಅಂಗವಾಗಿ ಮುಡಿ ನೀಡುವುದು ವಾಡಿಕೆ. ನಿತ್ಯ ಪೂಜೆಗೊಳಪಡುವ ತಿಮ್ಮಪ್ಪನ ವಿಗ್ರಹಕ್ಕೆ ಕೇಶವಿದೆ ಎನ್ನುವುದು ಹಲವರಿಗೆ ತಿಳಿದಿಲ್ಲ. ಅಷ್ಟೇ ಅಲ್ಲಾ ಈ ಕೇಶರಾಶಿ ಪ್ರತಿ ವರ್ಷವೂ ವೃದ್ಧಿಸುತ್ತಾ ಹೋಗುತ್ತಿರುವುದು ಕೂಡ ಆಶ್ಚರ್ಯವೇ ಸರಿ. ಥೇಟ್ ಮನುಷ್ಯರ ಕೇಶವನ್ನೇ ಹೋಲುವಂತಿರುವ ಈ ಕೂದಲು ವರ್ಷ ವರ್ಷಕ್ಕೂ ಬೆಳೆಯುತ್ತಲೇ ಸಾಗಿದೆ. ಅಷ್ಟೇ ಅಲ್ಲಾ ವರ್ಷದಲ್ಲಿ ಒಂದು ಪವಿತ್ರ ದಿನ ಇದನ್ನು ಕತ್ತರಿಸಿ ಭಕ್ತರಿಗೆ ಹರಾಜು ಹಾಕುವ ಸಂಪ್ರದಾಯವೂ ಇಲ್ಲಿದೆ.
ನಿಗೂಢ ಗ್ರಾಮದಿಂದ ಬರುತ್ತದೆ ಹೂವು-ಬೆಣ್ಣೆ!
ಇನ್ನೊಂದು ಅಚ್ಚರಿಯ ಬೆಳವಣಿಗೆ ಶತಮಾನಗಳಿಂದಲೂ ತಿಮ್ಮಪ್ಪನ ಸನ್ನಿಧಿಯಲ್ಲಿ ಘಟಿಸುತ್ತಿದೆ. ಬೆಟ್ಟದೊಡಯನ ಪೂಜೆಗೆ ನಿತ್ಯವೂ ಹತ್ತಾರು ಬಗೆಯ ಹೂವುಗಳು ಬರುತ್ತವೆ. ಅದರಲ್ಲೂ ಗರ್ಭಗುಡಿಯಲ್ಲಿರುವ ವೆಂಕಟೇಶ್ವರನ ಪೂಜೆಗೆ ವಿಶೇಷವಾಗಿ ಹೂವು, ಬೆಣ್ಣೆ, ಬಿಲ್ವ ಪತ್ರೆ, ಹಾಲು ಬರುವುದು ತಿರುಮಲದ ಸುತ್ತಮುತ್ತಲ ವ್ಯಾಪ್ತಿಯಿಂದ. ಅಂದಾಜು 22 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಈ ಗ್ರಾಮಗಳ ಬಗ್ಗೆ ಇಂದಿಗೂ ಹೊರಜಗತ್ತಿಗೆ ಸ್ಪಷ್ಟ ಮಾಹಿತಿಯಿಲ್ಲ. ಆಯ್ದ ಕೆಲವರಷ್ಟೇ ದೇಗುಲಕ್ಕೆ ಭೇಟಿ ನೀಡಿ ಹೂವು ಸೇರಿದಂತೆ ಉಳಿದ ವಸ್ತುಗಳನ್ನು ಪೂರೈಸಿ ಮರಳಿ ಹೋಗುತ್ತಾರೆ. ಹಾಗಾಗಿಯೇ ಇವತ್ತಿಗೂ ಈ ಗ್ರಾಮಗಳನ್ನು ನಿಗೂಢ ಗ್ರಾಮಗಳು ಅಂತಲೇ ಕರೆಯಿಸಿಕೊಳ್ಳುತ್ತಿವೆ.

ಗರ್ಭಗುಡಿಯಲ್ಲಿ ಕೇಳಿಸುತ್ತೆ ಅಲೆಗಳ ಸದ್ದು!
ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿರುವ ತಿರುಮಲದಲ್ಲಿ ಮತ್ತೊಂದು ನಿಗೂಢ ವಿಸ್ಮಯ ನಡೆಯುತ್ತದೆ. ನಿತ್ಯ ಪೂಜೆಗೊಳಪಡುವ ವೆಂಕಟೇಶ್ವರ ಮೂರ್ತಿಯ ಬೆನ್ನಿಗೆ ಕಿವಿಗೊಟ್ಟು ಕೇಳಿದರೆ ಅಲ್ಲೊಂದು ಸದ್ದು ಕೇಳಿಬರುತ್ತೆ. ಅದು ಸಮುದ್ರದ ಅಲೆಗಳು ಅಪ್ಪಳಿಸುವಂಥಾ ಸದ್ದು. ಇದನ್ನು ಕೇಳಿ ಭಕ್ತರು ಅಚ್ಚರಿ ಪಡುತ್ತಿದ್ದರೆ, ವಿಜ್ಞಾನ ಲೋಕ ವಿಸ್ಮಯಗೊಳ್ಳುತ್ತಿದೆ.
ಆರಾಧಿಸುವ ಮೂರ್ತಿಯ ಬೆನ್ನು ಸದಾ ತೇವ!
ಬಾಲಾಜಿ ವಿಗ್ರಹದ ಮತ್ತೊಂದು ದೊಡ್ಡ ಆಶ್ಚರ್ಯ ಏನೆಂದರೆ, ವಿಗ್ರಹದ ಬೆನ್ನು ಸದಾ ಒದ್ದೆಯಾಗಿರುತ್ತದೆ. ಅದೆಷ್ಟೇ ಬಾರಿ ಒರಸಿದರೂ ಇಂದಿಗೂ ವಿಗ್ರಹದ ಬೆನ್ನು ಮಾತ್ರ ಹಸಿಯಾಗೇ ಇರುತ್ತೆ. ನೀರು ಜಿನುಗುವ ಇದರ ಹಿಂದಿನ ಗುಟ್ಟನ್ನ ಇಂದಿಗೂ ವಿಜ್ಞಾನಿಗಳಿಗೂ ಬೇಧಿಸಲಾಗಿಲ್ಲ ಅನ್ನೋದು ಕಟು ಸತ್ಯ. ಅದಕ್ಕೆ ಅಲ್ಲವೇ ಭಾರತವು ದೇವರಗಳ ನಾಡು. ವಿಸ್ಮಯದ ನಾಡು ಅನ್ನೋದು.