ಶಿವಮೊಗ್ಗ: ಮಲೆನಾಡು ಪ್ರದೇಶದಲ್ಲಿ ಅಪರೂಪದ ಹಾರುವ ಓತಿ ಪ್ರತ್ಯಕ್ಷವಾಗಿದ್ದು ಜನ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಾರೋಹಿತ್ತಲಿನಲ್ಲಿ ಓತಿ ಕಾಣಿಸಿಕೊಂಡಿದೆ. ಹಾರೋಹಿತ್ತಲಿನ ಹೆಡತ್ರಿ ಮಲತೇಶ್ ಎಂಬುವವರ ತೋಟದಲ್ಲಿ ಈ ಹಾರುವ ಓತಿ ಕಾಣಿಸಿಕೊಂಡಿದೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಮಲತೇಶ್ ಎಂಬುವವರು ತಮ್ಮ ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.
ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಕಾದಂಬರಿಯಲ್ಲಿ ಹಾರುವ ಓತಿ ಒಂದು ಪ್ರಮುಖ ವಿಷಯವಾಗಿತ್ತು. ಹಾರುವ ಓತಿ ಬಗ್ಗೆ ಕರ್ವಾಲೋ ಕಾದಂಬರಿಯಲ್ಲಿ ತಿಳಿಸಲಾಗಿತ್ತು. ಈ ಓತಿ ಸದ್ಯ ಅಳಿವಿನ ಅಂಚಿನಲ್ಲಿದ್ದು, ಇದನ್ನು ಕಂಡು ಜನ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.