ಕೊಪ್ಪಳ: ಈಗಾಗಲೇ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ಕಾರ್ಮೋಡ ಕವಿದಿದೆ. ಇಂತಹ ಸಂಧರ್ಭದಲ್ಲಿ ಯುದ್ದಕ್ಕೆ ಹೆಚ್ಚು ಸೈನಿಕರ ಅಗತ್ಯ ಇದೆ. ಆ ಹಿನ್ನೆಲೆಯಲ್ಲಿ ರಜೆಗೆಂದು ತನ್ನ ಉಟ್ಟೂರಿಗೆ ಬಂದಿದ್ದ ಕುಷ್ಟಗಿ ಪಟ್ಟಣದ ವೀರೇಶ ಹಿರೇಮನಿ ಎಂಬ ಯೋಧ ಕರ್ತವ್ಯಕ್ಕೆ ವಾಪಾಸ್ಸಾಗುತ್ತಿದ್ದಾರೆ.
ಸಂಬಂಧಿಗಳ ಸಾವಿನ ಹಿನ್ನೆಲೆಯಲ್ಲಿ ರಜೆ ತೆಗೆದುಕೊಂಡು ಊರಿಗೆ ಬಂದಿದ್ದರು. ಇನ್ನೂ ಒಂದು ವಾರ ರಜೆ ಬಾಕಿ ಇತ್ತು. ಆದರೆ, ಕರ್ತವ್ಯ ಕರೆಯ ಹಿನ್ನಲೆಯಲ್ಲಿ ಹಾಗೂ ಯುದ್ದದ ಭೀತಿಯ ಮಧ್ಯೆಯೂ ಕರ್ತವ್ಯಕ್ಕೆ ಯೋಧ ಮರಳುತ್ತಿದ್ದಾರೆ. ಇದೇ ವೇಳೆ ಗ್ರಾಮಸ್ಥರು ಆ ಯೋಧನ ಹಣೆಗೆ ಸಿಂಧೂರ ಇಟ್ಟು ಬೀಳ್ಕೊಟ್ಟಿದ್ದಾರೆ.