ರಾಯಚೂರು: ಮಹಿಳೆಯ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ರಾಯಚೂರು ಜಿಲ್ಲೆಯ ಸಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ನಲ್ಲಿ ಈ ಘಟನೆ ನಡೆದಿದೆ. ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಬೈಕ್ ನಿಂದ ಬಿದ್ದ ಮಹಿಳೆಯ ಮೇಲೆ ಲಾರಿ ಹರಿದಿದೆ.
ಮೃತ ಮಹಿಳೆಯನ್ನು ಸಿಂಧನೂರು ತಾಲೂಕು ಪುಲಮೇಶ್ವರ (Pulameshwara) ದಿನ್ನಿ ಗ್ರಾಮದ ನಿವಾಸಿ 50 ವರ್ಷದ ಹುಸೇನಮ್ಮ ಎಂದು ಗುರುತಿಸಲಾಗಿದೆ. ಪುಲಮೇಶ್ವರದಿಂದ ಸಿಂಧನೂರು ಕಡೆಗೆ ಹುಸೇನಮ್ಮ, ಮಗ ಹಾಗೂ ಮಗಳೊಂದಿಗೆ ಹೊರಟಿದ್ದರು.
ಲಾರಿಯನ್ನು ಓವರ್ ಟೇಕ್ ಮಾಡಲು ಹೋದ ಬೈಕ್ ನಿಯಂತ್ರಣ ತಪ್ಪಿದ್ದು, ಹುಸೇನಮ್ಮ ಕೆಳಗೆ ಬಿದ್ದಿದ್ದಾರೆ. ಅದೇ ಸಮಯಕ್ಕೆ ಅವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅಪಘಾತದಲ್ಲಿ ತಾಯಿಯ ದೇಹ ಎರಡು ಭಾಗವಾಗಿದೆ. ಇದನ್ನು ಕಂಡು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.