ಕಲಬುರಗಿ: ಬಕ್ರೀದ್ ಹಬ್ಬದ ದಿನವೇ ಹಸುವಿನ ರುಂಡ ಪತ್ತೆಯಾಗಿದ್ದು, ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರದ ಶರಣಬಸವೇಶ್ವರ ಕೆರೆ ರಸ್ತೆಯಲ್ಲಿ ಹಸುವಿನ ರುಂಡ ಪತ್ತೆಯಾಗಿದೆ. ರಸ್ತೆ ಬದಿಯಲ್ಲಿ ಹಸುವಿನ ರುಂಡ ಹಾಗೂ ಮಾಂಸ ಬಿದ್ದಿವೆ. ಬದಿಗೆ ಬಿದ್ದಿದ್ದ ರುಂಡವನ್ನು ನಾಯಿಗಳು ರಸ್ತೆಗೆ ಎಳೆದು ತಂದಿವೆ. ರಸ್ತೆಯಲ್ಲಿ ಬಿದ್ದ ರುಂಡವನ್ನು ಕಂಡು ಕೆರೆಯ ಕೊಳಚೆ ಪ್ರದೇಶದಲ್ಲಿ ಅನಾಮಿಕರು ಎಸೆದು ಹೋಗಿದ್ದಾರೆ.
ಕೆರೆಯ ಕೊಳಚೆ ಪ್ರದೇಶದಲ್ಲಿ ಬಿದ್ದಿರುವ ರುಂಡವನ್ನು ಕಂಡು ವಿ ಹೆಚ್ ಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಬ್ರಹ್ಮಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.