ಬೀದರ್ : ಇಂಡೋ-ಪಾಕ್ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಈಗ ಯುದ್ದಭೂಮಿಗೆ ಸೈನಿಕರ ಅಗತ್ಯ ತುಂಬಾ ಇದೆ. ಆ ಹಿನ್ನೆಲೆಯಲ್ಲಿ ರಜೆ ಮೇಲೆ ತವರೂರಿಗೆ ಬಂದಿದ್ದ ಯೋಧ ಸೇವೆಗೆ ಮರಳುತ್ತಿದ್ದಾರೆ.

ಹುಲಸೂರ ತಾಲೂಕಿನ ಬೇಲೂರ ಗ್ರಾಮದ ಬಿಎಸ್ ಎಫ್ ಯೋಧ ಅನೀಲ್ ಪಾಟೀಲ್ 30 ದಿನ ರಜೆ ಪಡೆದು ಊರಿಗೆ ಬಂದಿದ್ದರು. ಆದರೆ, ಈಗ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮರಳಿ ಸೇವೆಗೆ ಹಾಜರಾಗಲು ಸೂಚನೆ ಬಂದಿದೆ. ಹೀಗಾಗಿ ಲ್ಲಿ ರಜೆ ರದ್ದುಗೊಳಿಸಿ ಸೇವೆಗೆ ಹಿಂತಿರುಗಿದ್ದಾರೆ. ಬಿಎಸ್ಎಫ್ ಯೋಧ ಅನಿಲ್ ಪಾಟೀಲ್ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಹಾರೈಸಿ ಕಳುಹಿಸಿದ್ದಾರೆ. ಯೋಧನ ಮೇಲೆ ಹೂವಿನ ಸುರಿಮಳೆಗೈಯ್ದಿದ್ದಾರೆ. ಈ ವೇಳೆ ಭಾರತಾಂಬೆಯ ಪರ ಘೋಷಣೆ ಕೂಗಲಾಗಿದೆ.