ಹಾವೇರಿ: ನಾಗಮಂಗಲದ ಹಿಂದೂಗಳು ಮುಸ್ಲಿಮರೊಂದಿಗೆ ವ್ಯಾಪಾರ- ವಹಿವಾಟು ನಡೆಸಬೇಡಿ ಎಂದು ಶ್ರೀರಾಮ ಸೇನೆಯ ಸಂಸ್ಱಾಪಕಾಧ್ಯಕ್ಷ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಲಭೆ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಶಾಂತ ರೀತಿಯಾಗಿ ಹೊರಟಿದ್ದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಮಸೀದಿ ಹತ್ತಿರ ಬರುತ್ತಿದ್ದಂತೆ ಚಪ್ಪಲಿ, ಪೆಟ್ರೋಲ್ ಬಾಂಬ್ ಎಸೆದು ಗಲಭೆ ಮಾಡಿದ್ದಾರೆ. ಇದು ಖಂಡನೀಯ ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಸೀದಿ ಮುಂದೆ ಹೊಗಬಾರದಾ? ಅದು ಸಾರ್ವಜನಿಕ ರಸ್ತೆ. ಯಾವ ಸೊಕ್ಕಿನ ವರ್ತನೆ ಇದು? ಇದಕ್ಕೆ ಕಾರಣ ಕಾಂಗ್ರೆಸ್. ತಲೆಯ ಮೇಲೆ ಹೊತ್ತು ಕುಣಿದಿದ್ದು ಅವರೇ. ಇನ್ನು ಮೇಲೆ ಇಂತಹ ವರ್ತನೆಯನ್ನು ಹಿಂದು ಸಮಾಜ ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಪ್ಪಲಿ, ಚಾಕು ಚೂರಿ ಹಿಡಿದುಕೊಂಡು ಓಡಾಡಿದ್ದಾರೆ. ಮಸೀದಿ ಗಲಾಟೆ ಮಾಡುವ ಸೆಂಟರ್ ಆಗಿದೆ. ಹಿಂದೂಗಳು ಮುಸ್ಲಿಮರನ್ನು ಬಹಿಷ್ಕಾರ ಮಾಡಬೇಕು. ಯಾವುದೇ ವ್ಯವಹಾರ ವಹಿವಾಟು ಮಾಡಬಾರದು ಎಂದು ಹೇಳಿದ್ದಾರೆ.
ಇದೊಂದು ಪೂರ್ವನಿಯೋಜಿತ ಕೃತ್ಯ. ಗುಪ್ತಚರ ಇಲಾಖೆ ಪೊಲೀಸರು ಏನು ಮಾಡುತ್ತಿದ್ದಾರೆ. ಮುಲ್ಲಾ – ಮೌಲ್ವಿ ಮುಖಂಡರು ನಾಗಮಂಗಲ ಘಟನೆಯ ಗಲಭೆಕೋರರನ್ನು ನಿಷೇಧಿಸಿ ಫತ್ವಾ ಹೊರಡಿಸಲಿ. ಸಮಾಜದಿಂದ ಹೊರಗೆ ಹಾಕಲಿ ಎಂದು ಕಿಡಿಕಾರಿದ್ದಾರೆ.