ಕುಂದಾಪುರದ ಸೂರ್ನಳ್ಳಿ ರಸ್ತೆಯ ಗಾಯತ್ರಿ ಟೆಕ್ಸ್ ಟೈಲ್ಸ್ ಹಿಂಭಾಗ, ಶಿರಿಯಾರ ಗೋಪಾಲ ಕೃಷ್ಣ ಶೆಟ್ಟಿ ಅಡ್ವೋಕೇಟ್ ಬಿಲ್ಡಿಂಗ್ ಬಳಿ, ನೂತನವಾಗಿ “ಐ ಟೀಚ್” (I-Teach) ಹೆಸರಿನ ಕೋಚಿಂಗ್ ಅಕಾಡೆಮಿ ಶುಭಾರಂಭಗೊಂಡಿದೆ.
ನುರಿತ ಶಿಕ್ಷಕರೊಂದಿಗೆ ಹಲವು ನವ-ನವೀನ ಯೋಜಿತ ಕಾರ್ಯಕ್ರಮಗಳ ಗುರಿಯೊಂದಿಗೆ, ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ “ಐ-ಟೀಚ್” ತರಬೇತಿ ಕೇಂದ್ರ ಪ್ರಾರಂಭಿಸಿದ್ದೇವೆ. ಸಂಸ್ಥೆಯಲ್ಲಿ 5 ರಿಂದ 10 ನೇ ತರಗತಿಯವರೆಗೆ state, CBSE, ICSE ಎಲ್ಲಾ ವಿಷಯ ಗಳ ಟ್ಯೂಷನ್ ನೀಡಲಾಗುತ್ತದೆ ಹಾಗೂ 11th to 12th maths, physics, chemistry ಮತ್ತು CET ಕ್ರ್ಯಾಶ್ ಕೋರ್ಸ್ ಮೂಲಕ ವಿದ್ಯಾರ್ಥಿಗಳನ್ನು ಸದೃಢರನ್ನಾಗಿಸಲಾಗುವುದು ಎಂದು “ಐ-ಟೀಚ್” ಸಂಸ್ಥೆಯವರು ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡರು.

ಇನ್ನು ವಿಶೇಷವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಾದ್ಯ ಸಂಗೀತ ತರಬೇತಿ ಯನ್ನು ಕೂಡ ಇಲ್ಲಿ ನೀಡಲಾಗುತ್ತಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತದ ತರಗತಿಯ ಜೊತೆಯಲ್ಲಿ, ಸ್ಯಾಕ್ಸೋಫೋನ್, ಕೊಳಲು, ವೀಣೆ, ರಿದo ಪ್ಯಾಡ್, ತಬಲ ಸೇರಿದಂತೆ ವಾದ್ಯಸಂಗೀತಗಳ ತರಬೇತಿಯನ್ನೂ ಒಂದೇ ವೇದಿಕೆಯಲ್ಲಿ ಕಲಿಸಿಕೊಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು “ಐ ಟೀಚ್” ಸಂಗೀತ ತರಬೇತಿ ಸಂಸ್ಥೆಯ ನಿರ್ವಾಹಕರಾದ ನಿತ್ಯಾನಂದ ದೇವಾಡಿಗ ಕುಂದಾಪುರ ಮಾಹಿತಿ ನೀಡಿದರು.
ಈ ತರಬೇತಿ ಸಂಸ್ಥೆಯ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಶುಭಕೋರಿ ಮಾತನಾಡಿದ ಕೊಳಲು ಗುರುಗಳಾದ ಪ್ರದೀಪ್ ದೇವಾಡಿಗ ಕಾರ್ಕಳರವರು,
“ಇವತ್ತಿನ ವೇಗದ ದಿನಮಾನದಲ್ಲಿ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರಗಳನ್ನು ಕೊಳಲು, ನೃತ್ಯ ಸಂಗೀತದಂತಹ ಕಲೆ ಪ್ರಾಕಾರಗಳ ಮೂಲಕ ತಿಳಿಯಪಡಿಸುವ ಅಗತ್ಯವಿದೆ. ಇಲ್ಲದಿದ್ದರೆ ಯುವ ಸಮಾಜ ಅಪಾಯಕಾರಿ ಸ್ಥಿತಿಯತ್ತ ಸಾಗುವುದನ್ನು ತಡೆಯಲಾಗದು”ಎಲ್ಲೆಡೆ ಸಂಗೀತ ತರಗತಿಗಳ ಮೂಲಕ ಮಕ್ಕಳಲ್ಲಿ ಕಲಾಸಕ್ತಿ ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಯಲಿ ಭಾರತೀಯತೆಯನ್ನು ಉಳಿಸುವ ಅಗತ್ಯ ನಮ್ಮ ಮುಂದಿದೆ” ಹೆಚ್ಚಿನ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆದು ಕೊಳ್ಳಬೇಕು ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯ ವಾದ್ಯ ಕಲಾವಿದರಾದ ಸಂಜೀವ ದೇವಾಡಿಗ ಕುಂದಾಪುರ, ರಾಘವೇಂದ್ರ ದೇವಾಡಿಗ ಹೆಮ್ಮಾಡಿ ಉಪಸ್ಥಿತರಿದ್ದರು
