ಶಿವಮೊಗ್ಗ: ಗಂಗಾ ಕಲ್ಯಾಣ ಯೋಜನೆ ಫಲಾನುಭವಿಯೊಬ್ಬರಿಂದ 10,000 ರೂ. ಲಂಚ ಪಡೆದಿದ್ದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕನಿಗೆ ಶಿವಮೊಗ್ಗ ನ್ಯಾಯಾಲಯವು 2 ವರ್ಷ ಜೈಲು, 40,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಆರ್.ಎಸ್. ಪರಮೇಶ್ವರಪ್ಪ ಎಂಬಾತ ಶಿಕ್ಷೆಗೆ ಗುರಿಯಾದ ಅಪರಾಧಿ. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಹೊಸಗುಂದದ ಹೆಚ್.ಎಸ್. ಜನಾರ್ಧನ ಎಂಬವರಿಗೆ ಮಂಜೂರಾದ ಕೊಳವೆ ಬಾವಿ ಕೊರೆಸಲು 10,000 ರೂ. ಲಂಚಕ್ಕೆ ಅಪರಾಧಿ ಬೇಡಿಕೆ ಇಟ್ಟಿದ್ದ. ಈ ವೇಳೆ ಲಂಚ ಪಡೆಯುವಾಗ ಕಚೇರಿಯಲ್ಲೇ ರೆಡ್ಹಾಂಡ್ ಆಗಿ ಸಿಕ್ಕಿಬಿದ್ದಿದ್ದ.
ಪ್ರಕರಣದ ತನಿಖಾಧಿಕಾರಿ ಲೋಕಾಯುಕ್ತ ಡಿಎಸ್ಪಿ ಎ.ಚಂದ್ರಪ್ಪ, ತನಿಖೆ ಕೈಗೊಂಡು ಆಪರಾಧಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸಾರ್ವಜನಿಕ ಅಭಿಯೋಜಕ ಎಂ.ಡಿ.ಸುಂದರ್ರಾಜ್ ಲೋಕಾಯುಕ್ತ ಪರ ವಾದ ಮಂಡಿಸಿದ್ದರು.
ಇದನ್ನೂ ಓದಿ: ಪ್ರೀತಿಗೆ ಪೋಷಕರ ವಿರೋಧ – ತಾತನ ಮನೆಗೆ ಹೋಗಿದ್ದ ಪ್ರೇಮಿಗಳು ಆತ್ಮಹತ್ಯೆ


















