ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಕಸ್ಕೆಬೈಲಿನಲ್ಲಿ ಮನೆಯೊಂದರ ಬಳಿ ನಡೆದಿದೆ.
ಫಸ್ಟ್ ರ್ಯಾಂಕ್ ರಾಜು ಸಿನಿಮಾ ನಟ ಗುರುನಂದನ್ ಮನೆ ಬಳಿಯ ಸ್ವಿಮಿಂಗ್ ಫೂಲ್ ನಲ್ಲಿ ಕಾಡಾನೆಯೊಂದು ನೀರು ಕುಡಿದು, ಬಿಂದಾಸ್ ಆಗಿ ರೌಂಡ್ಸ್ ಹಾಕಿದ ದೃಶ್ಯ ಕಂಡು ಬಂದಿದೆ.
ಕಾಡಾನೆ ಭೀಮನ ಜೊತೆ ಮತ್ತೊಂದು ಕಾಡಾನೆ ಓಡಾಡುತ್ತಿದ್ದು, ಮನೆಯ ಸುತ್ತ ಸಂಚಾರ ಮಾಡಿ ಆತಂಕ ಸೃಷ್ಟಿಸಿದೆ. ಕಾಡಾನೆ ಓಡಾಟ, ನೀರು ಕುಡಿಯುವ ದೃಶ್ಯ ಸದ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : ವಿರಾಜಪೇಟೆಯಲ್ಲಿ ನರಹಂತಕ ಕಾಡಾನೆ ಸೆರೆ : ಗ್ರಾಮಸ್ಥರಿಗೆ ನಿಟ್ಟುಸಿರು



















