ಶಿವಮೊಗ್ಗ : ಭೂಮಿಯ ಹಕ್ಕಿಗಾಗಿ ಮುಳುಗಡೆ ಸಂತ್ರಸ್ಥ ರೈತರ ಹೋರಾಟ ಮುಂದುವರೆದಿದೆ. ಮಲೆನಾಡು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಸಾವಿರಾರು ರೈತರು ನೂತನ ಸಿಗಂದೂರು ಸೇತುವೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಸಮಿತಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಹೋರಾಟಗಾರರು, ʼಸೇತುವೆಗಿಂತ ನಮಗೆ ಭೂಮಿ ಹಕ್ಕು ಮುಖ್ಯʼ ಎಂದು ಘೋಷಣೆ ಕೂಗಿದ್ದಾರೆ.
ರೈತರ ಪ್ರತಿಭಟನೆಯಿಂದ ಶಿವಮೊಗ್ಗದ ಸಾಗರ ತಾಲೂಕಿನ ಅಂಬಾರಗೊಡ್ಲು- ಕಳಸವಳ್ಳಿ ನಡುವಿನ ಸೇತುವೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೆಪಿಸಿ ಭೂಮಿ ಸಾಗುವಳಿದಾರರಿಗೆ ಭೂಮಿ ಹಕ್ಕು ನೀಡುವಂತೆ ಹಾಗೂ ಕೆಪಿಸಿ ಬಳಸದೇ ಇರುವ ಭೂಮಿ ವಾಪಸ್ ನೀಡಲು ರೈತರು ಒತ್ತಾಯಸಿ ಕಾಲಮಿತಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆ ಸೇತುವೆ ಬಳಿ ಪೊಲೀಸರು. ಬಿಗಿ ಭದ್ರತೆ ಕೈಗೊಂಡಿದ್ದರು, ರೈತ ಗೀತೆ ಹಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಅಸಹನೆ ವ್ಯಕ್ತಪಡಿಸಿ ಸ್ಥಳೀಯ ಶಾಸಕರು, ಸಂಸದರು ಹಾಗೂ ಲೋಕಸಭಾ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಹಾಗೂ ಇದೇ ವೇಳೆ ಅರಣ್ಯ ಇಲಾಖೆಯ ತಮ್ಮನ್ನು ಒಕ್ಕಲೆಬ್ಬಿಸಬಾರದೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಅಲಿ ಖಮೇನಿ ಹತ್ಯೆ ಖಂಡಿಸಿ ಶಿವಮೊಗ್ಗ DC ಕಚೇರಿ ಮುಂದೆ ಪ್ರತಿಭಟನೆ!



















